RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ನಾಡೋಜ ಪ್ರಶಸ್ತಿ ಪುರಸ್ಕೃತ ಡಾ‌.ಮಹೇಶ ಜೋಶಿ ಇಂದು ನಗರಕ್ಕೆ

ಗೋಕಾಕ:ನಾಡೋಜ ಪ್ರಶಸ್ತಿ ಪುರಸ್ಕೃತ ಡಾ‌.ಮಹೇಶ ಜೋಶಿ ಇಂದು ನಗರಕ್ಕೆ 

ನಾಡೋಜ ಪ್ರಶಸ್ತಿ ಪುರಸ್ಕೃತ ಡಾ‌.ಮಹೇಶ ಜೋಶಿ ಇಂದು  ನಗರಕ್ಕೆ

ಗೋಕಾಕ ಜ 1 : ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ಮಹೇಶ ಜೋಶಿ ಇಂದು ಗೋಕಾಕ ನಗರಕ್ಕೆ ಆಗಮಿಸಲಿದ್ದು , ಸಾಯಂಕಾಲ 7 ಘಂಟೆಗೆ ನಗರದ ಸೋಮವಾರ ಪೇಠಯಲ್ಲಿರುವ ಮುಪ್ಪಯ್ಯಮಠದಲ್ಲಿ ಜರಗುವ ಕಪಲಟ್ಟಿ – ಕಳ್ಳಿಗುದ್ದಿ ಶ್ರೀಮಠದ ಮಹಾದೇವ ಗುರುಗಳ 82 ನೇ ಜಯಂತಿ ಉತ್ಸವ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ ನಡೆಸುವ ಕನ್ನಡ ಉತ್ಸವ ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯ ನಿವೃತ್ತ ಮಹಾನಿದೇರ್ಶಕ ನಾಡೋಜ ಡಾ.ಮಹೇಶ ಜೋಶಿ ಅವರಿಗೆ “ಕನ್ನಡ ಜೋತಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದು .

ಗೋಕಾಕದ ಶೂನ್ಯ ಸಂಪಾದನ ಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು , ಮರಡಿಮಠದ ಪವಾಡೇಶ್ವರ ಸ್ವಾಮೀಜಿ , ಹುಕ್ಕೇರಿಯ ಚಂದ್ರಶೇಖರ್ ಶೀವಾಚಾರ್ಯ ಮಹಾಸ್ವಾಮಿಗಳು ,ಗೋಕಾಕದ ಮುಪ್ಪಯ್ಯನ ಮಠದ ರಾಚೋಟೇಶ್ವರ ಶೀವಾಚಾರ್ಯರು , ಮಣ್ಣೀಕೇರಿಯ ವಿಜಯಸಿದ್ದೇಶ್ವರ ಸ್ವಾಮೀಜಿ ,ಕಪ್ಪರಟ್ಟಿ – ಕಳ್ಳಿಗುದ್ದಿಯ ಬಸವರಾಜ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು ಎಂದು ಕಾರ್ಯಕ್ರಮದ ಸಂಚಾಲಕ ಬಸವರಾಜ ಸ್ವಾಮೀಜಿಗಳವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related posts: