ಗೋಕಾಕ:ಬೂರ್ಕಾ ಧರಿಸಿ ಓಡಾಡಿದ “ವೆಂಕಟೇಶ ಸಿದ್ದರಾಯಿ” ಕೆಲಸಕ್ಕೆ ಬಂತು ಕುತ್ತೂ : ಇದು “ನಮ್ಮ ಬೆಳಗಾವಿ” ಇಂಪ್ಯಾಕ್ಟ್

ಬೂರ್ಕಾ ಧರಿಸಿ ಓಡಾಡಿದ “ವೆಂಕಟೇಶ ಸಿದ್ದರಾಯಿ” ಕೆಲಸಕ್ಕೆ ಬಂತು ಕುತ್ತೂ : ಇದು “ನಮ್ಮ ಬೆಳಗಾವಿ” ಇಂಪ್ಯಾಕ್ಟ್
ಗೋಕಾಕ ನ 9 : ಕಳೆದ ದಿ. ನವೆಂಬರ 11 ರಂದು ಸಾಯಂಕಾಲ ನಗರದ ಹೊಸಪೇಠ ಓಣಿಯಲ್ಲಿದ್ದ ಕೆನೆರಾ ಬ್ಯಾಂಕ್ ಅಕ್ಕಪಕ್ಕ ಬೂರ್ಕಾ ಧರಿಸಿ ಅನುಮಾನಾಸ್ಪದ ತಿರುಗಾಡುತ್ತಿದ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಆರೋಪಿ ವೆಂಕಟೇಶ ಸಿದ್ದರಾಯಿಗೆ ಕೆಲಸ ಕಳೆದುಕೋಳುವ ಭೀತಿ ಎದುರಾಗಿದೆ .
ಕಳೆದ ವರ್ಷ ನಡೆದ ಈ ಘಟನೆಯಿಂದ ಕೆನೆರಾ ಬ್ಯಾಂಕನ ಹಿರಿಯ ಅಧಿಕಾರಿಗಳು ಇತನನ್ನು ಕೆಲ ದಿನಗಳ ಕಾಲ ಅಮಾನತು ಮಾಡಿ, ನಂತರ ದೂರದ ತಮಿಳನಾಡಿಗೆ ವರ್ಗಾವಣೆ ಗೋಳಿಸಿ ಇತನ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಬ್ಯಾಂಕಿನ ಉನ್ನತ ಮಟ್ಟದ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿರುವ ಆರೋಪಿ ವೆಂಕಟೇಶ್ ಸಿದ್ದರಾಯಿ ಕೆಲಸ ಕಳೆದು ಕೋಳುವ ಭೀತಿಯನ್ನು ಎದುರಿಸುತ್ತಿದ್ದಾನೆ ಎಂದು ಕೆನೆರಾ ಬ್ಯಾಂಕಿನ ಉನ್ನತ ಮೂಲಗಳಿಂದ ತಿಳಿದು ಬಂದಿದೆ . ಇನ್ನೆರಡು ವಿಚಾರಣೆಗಳು ಮಾತ್ರ ಬಾಕಿ ಇದ್ದು , ಆರೋಪ ಸಾಭಿತಾದರೆ ಅವನನ್ನು ಕೆಲಸದಿಂದ ವಜಾಗೊಳಿಸಲಾಗುವದೆಂದು ಬ್ಯಾಂಕಿನ ಉನ್ನತ ಮೂಲಗಳಿಂದ ತಿಳಿದು ಬಂದಿದೆ
ಇದು ನಮ್ಮ ಬೆಳಗಾವಿ ಇ – ವಾರ್ತೆ ಇಂಪ್ಯಾಕ್ಟ್ : ಅನುಮಾನಾಸ್ಪದವಾಗಿ ನಗರದಲ್ಲಿ ಬೂರ್ಕಾ ಧರಿಸಿ ತಿರುಗಾಡುತ್ತಿರುವ ವ್ಯಕ್ತಿಯ ಬಗ್ಗೆ ಕಳೆದ ನವೆಂಬರ 11 ರಂದು ನಮ್ಮ ಬೆಳಗಾವಿ ಇ – ವಾರ್ತೆ ವರದಿ ಮಾಡಿತ್ತು , ಬ್ಯಾಂಕಿನ ಅಧಿಕಾರಿಗಳು ವಿಚಾರಣೆ ವೇಳೆ ಆರೋಪಿಯ ವಿರುದ್ಧ ನಮ್ಮ ಬೆಳಗಾವಿಯ ವರದಿಯನ್ನು ಹಾಜರು ಪಡೆಸಿದ್ದರು . ಆಂತರಿಕ ವಿಚಾರಣೆಯನ್ನು ನಡೆಸುತ್ತಿರುವ ಬ್ಯಾಂಕಿನ ಹಿರಿಯ ಅಧಿಕಾರಿಗಳ ತಂಡ ನಮ್ಮ ಬೆಳಗಾವಿ ವಾರ್ತೆಯಲ್ಲಿ ಭೀತ್ತರಗೊಂಡಿದ್ದ ವರದಿಯನ್ನು ಎತ್ತಿ ಹಿಡಿದಿವೆ ಎಂದು ತಿಳಿದು ಬಂದಿದೆ. ಬಲ್ಲ ಮೂಲಗಳ ಪ್ರಕಾರ ಇನ್ನೆರಡು ವಿಚಾರಣೆಗಳು ಮಾತ್ರ ಬಾಕಿ ಉಳಿದಿದ್ದು ಆರೋಪ ಸಾಭಿತಾದರೆ ವೆಂಕಟೇಶ್ ಸಿದ್ದರಾಯಿ ಕೆಲಸ ಕಳೆದುಕೋಳುವದು ಗ್ಯಾರಂಟಿ ಎಂದು ಬ್ಯಾಂಕನ ಉನ್ನತ ಮೂಲಗಳು ನಮ್ಮ ಬೆಳಗಾವಿ ಪತ್ರಿಕೆಗೆ ಮಾಹಿತಿಯನ್ನು ಖಚಿತ ಪಡಿಸಿವೆ .
ಘಟನೆಯ ವಿವರ : ಕಳೆದ ನವೆಂಬರ್ ದಿ. 11 ರಂದು ಸಾಯಂಕಾಲ ಹೊಸಪೇಠ ಓಣಿಯಲ್ಲಿ ಬೂರ್ಕಾ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ ಖನಗಾಂವ ಗ್ರಾಮದ ವೆಂಕಟೇಶ್ ಸಿದ್ದರಾಯಿ ಅವನನ್ನು ಅಲ್ಲಿಯ ಹಿರಿಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರು . ಅಂದಿನ ಠಾಣಾಧಿಕಾರಿ ವಿಚಾರಣೆಗೆ ಒಳಪಡಿಸಿದಾಗ ಇತನು ಗೋಕಾಕ ತಾಲೂಕಿನ ಮಲ್ಲಾಪೂರ ಕೆನರಾ ಬ್ಯಾಂಕ್ ನ ಪ್ರಭಾರಿ ಮ್ಯಾನೆಜರ್ , ಬ್ಯಾಂಕಿನ ಅಧಿಕಾರಿಗಳ ಚಲನ ವಲನ ಗಮನಿಸಲು ಈ ರೀತಿ ಮಾಡಿರುವದಾಗಿ ತಪ್ಪೋಪಿಕೊಂಡಿದ್ದಾ . ಇನತ ಹೇಯ ಕೃತ್ಯಕ್ಕೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಇತನನ್ನು ದೂರದ ತಮಿಳುನಾಡಿಗೆ ವರ್ಗಾಯಿಸಿ ಈ ಪ್ರಕರಣದ ಬಗ್ಗೆ ವಿಚಾರಣೆಯನ್ನು ನಡೆಸುತ್ತಿದ್ದಾರೆ .