RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ

ಗೋಕಾಕ:ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ 

ಸ್ವಹಾರ್ದಯುತವಾಗಿ ರಮಜಾನ ಆಚರಿಸಿ : ಶಾಂತಿ ಪಾಲನಾ ಸಭೆಯಲ್ಲಿ ಡಿ.ವಾಯ್.ಎಸ್.ಪಿ ವಿರಭದ್ರಯ್ಯ
ಗೋಕಾಕ ಜೂ 24: ಶಾಂತಿಯ ಸಂಕೇತವಾಗಿರುವ ರಮಜಾನ ಹಬ್ಬವನ್ನು ಮುಸ್ಲಿಂ ಭಾಂಧವರು ಸ್ವಹಾರ್ದಯುತವಾಗಿ ಆಚರಿಸಬೇಕೆಂದು ಗೋಕಾಕ ಡಿ.ವಾಯ್.ಎಸ್.ಪಿ ವೀರಭದ್ರಯ್ಯ ಹೇಳಿದರು

ರಮಜಾನ ಹಬ್ಬದ ಪ್ರಯುಕ್ತ ನಗರದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಕರೆ ನೀಡಿದರು.

ಹಿರಿಯ ನಗರಸಭೆಯ ಸದಸ್ಯ ಎಸ್.ಎ.ಕೋತವಾಲ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಸಹ ಮುಸ್ಲಿಂ ಭಾಂಧವರು ಶಾಂತತೆಯಿಂದ ಹಬ್ಬವನ್ನು ಆಚರಿಸಿಬೇಕು ಯಾವುದೆ ಅಹಿತಕರ ಘಟನೆಗಳು ನಡೆಯಲು ಆಸ್ಪದ ನೀಡದೆ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೋಳ್ಳಬೇಕೆಂದು ಹೇಳಿದರು

ಸಭೆಯಲ್ಲಿ ಸಿಪಿಐ ತವನಪ್ಪಗೋಳ ,ನಗರ ಠಾಣೆಯ ಪಿಎಸ್ಐ ಜಾನಾವರ ಸೇರಿದಂತೆ ಸಮಾಜದ ಹಲವು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು

Related posts: