ಮೂಡಲಗಿ:ಮೂಡಲಗಿಯಲ್ಲಿ ಸಂಭ್ರಮದ ರಾಜ್ಯೋತ್ಸವ
ಮೂಡಲಗಿಯಲ್ಲಿ ಸಂಭ್ರಮದ ರಾಜ್ಯೋತ್ಸವ
ಮೂಡಲಗಿ ನ 1 : ಪಟ್ಟಣದಲ್ಲಿ ಗುರುವಾರ 63ನೇ ಕನ್ನಡ ರಾಜ್ಯೋತ್ಸವವನ್ನು ಯುವ ಕನ್ನಡ ಅಭಿಮಾನಿಗಳ ನೆತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು.
ಮುಂಜಾನೆ 9 ಗಂಟೆಗೆ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ತಾಯಿ ಕನ್ನಡಾಂಭೆಯ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಇರಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ತೇರಿಗೆ ಚಾಲನೆ ನೀಡಲಾಯಿತು. ಯುವಕರು ಬಿರು ಬಿಸಿಲನ್ನು ಲೆಕ್ಕಿಸದೇ ಕನ್ನಡ ಅಭಿಮಾನದ ಗೀತೆಯ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಕನ್ನಡ ತೇರು ಸಾಗುತ್ತಿದಂತೆ ಅಭಿಮಾನಿಗಳು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಮಾಡಿ ಕನ್ನಡಭಿಮಾನ ಮೆರೆದರೂ.
ಕನ್ನಡ ಧ್ವಜ ಹಿಡಿದು ಭುವನೇಶ್ವರಿ ತಾಯಿಗೆ ಜಯವಾಗಲಿ ಯಾರಪ್ಪಂದ್ ಏನೈತಿ ಬೆಳಗಾವಿ ನಮದೈತಿ ಎಂಬ ಘೋಷ ವಾಕ್ಯವನ್ನು ಕೂಗುತ್ತ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಕಾಲೇಜ್ ರಸ್ತೆಯ ಮೂಲಕ ಕಲ್ಮೇಶ್ವರ ವೃತ್ತ, ಚೆನ್ನಮ್ಮ ವೃತ್ತ, ಕರೆಮ್ಮ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತದ ಮೂಲಕ ಸಾಗಿ ಕಲ್ಮೇಶ್ವರ ವೃತ್ತದಲ್ಲಿ ಮುಕ್ತಾಯಗೊಳಿಸಲಾಯಿತು. ಅದ್ದೂರಿಯಿಂದಾ ಜರುಗಿದ ಮೆರವಣಿಗೆಯೂ ಎಲ್ಲರಲ್ಲೂ ಕನ್ನಡಭಿಮಾನ ಮೂಡಿಸಿತು.
ನಗರದಲ್ಲಿ ರಾಜಾಜಿಸಿದ ಕನ್ನಡ ನಾಡ ಧ್ವಜ: ಗುರುವಾರ 63ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನ್ನಡ ನಾಡ ಧ್ವಜ ಮತ್ತು ತೋರಣ ರಾರಾಜಿಸಿತು. ಕಣ್ಣು ಹಾಯಿಸಿದಲ್ಲೆಲ್ಲ ಹಳದಿ ಕೆಂಪು ಬಣ್ಣದ ಕನ್ನಡ ಧ್ವಜವೇ ಕಾಣುತ್ತಿತ್ತು. ಯುವಕರು ತಮ್ಮ ಬೈಕ್ ಮತ್ತು ಕಾರುಗಳಿಗೆ ನಾಡಧ್ವಜವನ್ನು ಕಟ್ಟಿ ಕನ್ನಡ ಅಭಿಮಾನ ತೋರಿಸಿದರು.
ಮೆರವಣಿಗೆಗೆ ಮೆರಗು: 63 ನೇ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತರ ವೇಷಗಳು ಕನ್ನಡಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಸಿಹಿ ವಿತರಣೆ: 63ನೇ ಕನ್ನಡ ರಾಜ್ಯೋತ್ಸವ ಮೆರವಣಿಗೆ ಸಾಗಿದ ಕನ್ನಡಭಿಮಾನಿಗಳಿಗೆ ಯುವ ಕನ್ನಡ ಅಭಿಮಾನಿಗಳ ವತಿಯಿಂದ ಸಿಹಿ ವಿತರಿಸಲಾಯಿತು.
ರಾಜ್ಯೋತ್ಸವದ ಕನ್ನಡ ತೇರಿನ ಮೆರವಣಿಗೆಯಲ್ಲಿ ಪುರಸಭೆಯ ಸದಸ್ಯರಾದ ಶಿವಾನಂದ ಸಣ್ಣಕ್ಕಿ, ಹನುಮಂತ ಗುಡ್ಲಮನಿ, ಯಲ್ಲಪ್ಪ ಸಣ್ಣಕ್ಕಿ, ಸಂಜು ಕಮತೆ, ಸುಧೀರ ನಾಯರ್, ಸುಭಾಸ ಗೊಡ್ಯಗೋಳ, ಚೇತನ ನಿಶಾನಿಮಠ, ಸೋಮಯ್ಯ ಹಿರೇಮಠ, ರಾಜು ಭಜಂತ್ರಿ, ನವೀನ ಗಸ್ತಿ, ಪ್ರಕಾಶ ಮೂಡಲಗಿ, ಸಿದ್ದು ಹಂದಿಗುಂದ, ಕುಮಾರ ಗಿರಡ್ಡಿ, ಹನುಮಂತ ಸತರಡ್ಡಿ, ಶ್ರೀಶೈಲ ಸಂಕರಟ್ಟಿ, ಭಗವಂತ ಉಪ್ಪಾರ, ನೀಲಕಂಠ ಮೀಶಿ, ಸಾಗರ ಸಾಲಿಮಠ, ಈರಪ್ಪ ಢವಳೆಶ್ವರ, ಗುರು ಗಂಗನ್ನವರ, ಮಂಜು ಹೆಳವರ, ಹಾಗೂ ನೂರಾರು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.