ಘಟಪ್ರಭಾ:ಸತತ ಎರಡನೇಯ ಬಾರಿ ಜಿಪಿಎಲ್ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ಬಸವೇಶ್ವರ ಕ್ರಿಕೇಟರ್ಸ್ ತಂಡ
ಸತತ ಎರಡನೇಯ ಬಾರಿ ಜಿಪಿಎಲ್ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ಬಸವೇಶ್ವರ ಕ್ರಿಕೇಟರ್ಸ್ ತಂಡ
ಘಟಪ್ರಭಾ ಅ 23: ಕಳೆದ 10 ದಿನಗಳಿಂದ ಇಲ್ಲಿನ ಎಸ್ಡಿಟಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಘಟಪ್ರಭಾ ಪ್ರಿಮೀಯರ್-2018 (ಜಿಪಿಎಲ್) ಟ್ರೋಪಿಯನ್ನು ಸತತ ಎರಡನೇ ಬಾರಿಗೆ ಬಸವೇಶ್ವರ ಕ್ರಿಕೇಟರ್ಸ್ ತಂಡ ಗೆದ್ದುಕೊಂಡಿದೆ.
ಪೈನಲ್ ಪಂದ್ಯನಲ್ಲಿ ಎದುರಾಳಿ ತಂಡವಾದ ಮಲ್ಲಾಪೂರ ಬುಲ್ಸ್ ತಂಡವನ್ನು ಆಲ್ ಔಟ್ ಮಾಡುವ ಮೂಲಕ 50 ಸಾವಿರ ನಗದು ಹಾಗೂ ಆಕರ್ಷಿಕ ಟ್ರೋಫಿಯನ್ನು ಬಸವೇಶ್ವರ ಕ್ರಿಕೇಟರ್ಸ್ ತಂಡ ಪಡೆದುಕೊಂಡಿತು. ರನ್ನರಸಪ್ ತಂಡದವರು 25 ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು. ತೃತೀಯ ಬಹುಮಾನವಾದ 15 ಸಾವಿರ ನಗದು ಗುಡ್ಡಿ ಪ್ಯಾಥಸ್ಸ್ ತಂಡದವರು ಪಡೆದುಕೊಂಡರು.
ಪ್ರಥಮ ಬಹುಮಾನ 50 ಸಾವಿರ ನಗದು ಹಾಗೂ ಟ್ರೋಫಿಯನ್ನು ಉದ್ಯಮಿ ಲಖನ ಜಾರಕಿಹೊಳಿ ನೀಡಿದ್ದರು, ದ್ವಿತೀಯ ಬಹುಮಾನ 25 ಸಾವಿರ ನಗದು ಹಾಗೂ ಟ್ರೋಫಿಯನ್ನು ಗುತ್ತಿಗೆದಾರ ಜಯಶೀಲ ಶೆಟ್ಟಿಯವರು ಹಾಗೂ ತೃತೀಯ ಬಹುಮಾನವನ್ನು 15 ಸಾವಿರ ನಗದು ಹಾಗೂ ಟ್ರೋಫಿಯನ್ನು ಹಣಮಂತ ಗಾಡಿವಡ್ಡರ ನೀಡಿದರು. ಸರಣಿ ಶ್ರೇಷ್ಠ ಆಟಗಾರನಿಗೆ ಯುವ ಧರೀಣ ಅಲ್ತಾಪ ಉಸ್ತಾದ ಅವರಿಂದ 10500 ರೂ. ಬೆಲೆಯ 21 ಗೇಯರಿನ ಸೈಕಲನ್ನು ನೀಡಿದರು.
ಸರನಿ ಉದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿದ ಗುಡ್ಡಿ ಪ್ಯಾಥಸ್ಸ್ ತಂಡದ ಆಟಗಾರ ಶಿವಾಜಿ ಪತಾಗಿರಿ ಅವರಿಗೆ ಮ್ಯಾನ್ ಆಫ್ ದ ಸಿರೀಜ್ ಸೈಕಲನ್ನು ನೀಡಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಎಸ್.ಆಯ್.ಬೆಣವಾಡಿ ಮನುಷ್ಯನಿಗೆ ಸದೃಢವಾದ ಆರೋಗ್ಯ ಬೇಕಾದರೆ ಆತನಲ್ಲಿ ಕ್ರೀಡೆ ಅತಿಗತ್ಯ. ಕ್ರೀಡೆ ಎನ್ನುವುದು ಮನುಷ್ಯನ ಅವಿಭಾಜ್ಯ ಅಂಗವಾಗಿರಬೇಕು ಕ್ರೀಡೆಯಲ್ಲಿ ಭಾಗವಹಿಸಿದ ವ್ಯಕ್ತಿ ಯಾವಾಗಲೂ ಉಲ್ಲಾಸ ಹಾಗೂ ಚಟುವಟಿಕೆಯಿಂದ ಕೂಡಿರುತ್ತಾನೆ. ಜಾರಕಿಹೊಳಿ ಸಹೋದರರು ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಡಿ.ಎಂ.ದಳವಾಯಿ, ಸುಭಾಸ ಹುಕ್ಕೇರಿ, ಸುಲ್ತಾನಸಾಬ ಕಬ್ಬೂರ, ಅಲ್ತಾಪ ಉಸ್ತಾದ, ತಾ.ಪಂ.ಸದಸ್ಯ ಲಗಮಣ್ಣ ನಾಗನ್ನವರ, ಸುಧೀರ ಜೋಡÀಟ್ಟಿ, ಮಾರುತಿ ಹುಕ್ಕೇರಿ, ಜಾಕೀರ ಬಾಡಕರ, ನವೀನ ಹೊಸಮನಿ, ಪುಟ್ಟು ಖಾನಪೂರೆ, ಮಹೇಶ ಪಾಟೀಲ, ಸಲೀಮ ಕಬ್ಬೂರ, ಸುನೀಲ ನಾಯಿಕ, ಕಲ್ಲಪ್ಪ ಕಾಡದವರ,ಬಸವರಾಜ ಕಾಡದವರ, ರಾಜು ಸಂಪಗಾವಿ, ಪುಟ್ಟು ಗಂಡವ್ವಗೋಳ, ಬಿ.ಆರ್.ಕರಿಗಾರ, ಕುಮಾರ ಹುಕ್ಕೇರಿ ಸೇರಿದಂತೆ ಕ್ರೀಡಾ ಪಟುಗಳು ಮತ್ತು ಕ್ರೀಡಾಭಿಮಾನಿಗಳು ಇದ್ದರು.