RNI NO. KARKAN/2006/27779|Wednesday, January 28, 2026
You are here: Home » breaking news » ಬೆಳಗಾವಿ:2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ

ಬೆಳಗಾವಿ:2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ 

2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ

ಬೆಳಗಾವಿ ಅ 17 : 2 ಕೋಟಿ ರೂ ಅಷ್ಪು ಠೇವಣಿ ಮರಳಿಸದೆ ಪಂಗನಾಮ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿಯ ಶಿವಾಜಿ ನಗರದ ಸೊಸೈಟಿಯೊಂದರ ಸಿಬ್ಬಂದಿಯನ್ನು ಗ್ರಾಹಕರು ದಳಿಸಿರುವ ಘಟನೆ ನಡೆದಿದೆ
ಜಿಲ್ಲೆಯ ಶಿವಾಜಿನಗರದಲ್ಲಿರುವ ಸಿದ್ಧಾರ್ಥ ಕೋ ಅಪರೇಟಿವ್ ಸೊಸೈಟಿಯ ಸಿಬ್ಬಂದಿ ಗ್ರಾಹಕರಿಂದ ಥಳಿತಕ್ಕೆ ಒಳಗಾಗಿದ್ದಾರೆ. ನೂರಾರು ಗ್ರಾಹಕರು ಇಲ್ಲಿ ಠೇವಣಿ ರೂಪದಲ್ಲಿ ಹಣ ಇಟ್ಟಿದ್ದರು. ಠೇವಣಿ ಅವಧಿ ಮುಗಿದರೂ ಗ್ರಾಹಕರಿಗೆ ಹಣ ಮರಳಿಸಲ್ಲ. ಅಂದಾಜು 2 ಕೋಟಿ ರೂ.‌ ಅಧಿಕ‌ ಗ್ರಾಹಕರ‌ ಠೇವಣಿ ಹಣ ದುರುಪಯೋಗ ‌ಆಗಿದೆ ಎಂಬ ಆರೋಪ ಸೊಸೈಟಿ ವಿರುದ್ಧ ಕೇಳಿ‌ ಬಂದಿದೆ.‌ 
ಹಣ ಮರಳಿಸದ ಸೊಸೈಟಿ ಸಿಬ್ಬಂದಿ ಕ್ರಮ‌ ಖಂಡಿಸಿ ಗ್ರಾಹಕರು ‌ಸೊಸೈಟಿ‌ಗೆ ಮುತ್ತಿಗೆ ಹಾಕಿ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. ಕಂಪ್ಯೂಟರ್ ‌ಧ್ವಂಸ‌ ಮಾಡಲು ಯತ್ನಿಸುವ ಜತೆಗೆ‌ ಸಿಬ್ಬಂದಿ‌ಯನ್ನೂ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ

Related posts: