RNI NO. KARKAN/2006/27779|Monday, June 16, 2025
You are here: Home » breaking news » ಖಾನಾಪುರ:25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಹತ್ಯೆ ಮಾಡಿ ಸಾಗಿಸುತ್ತಿದ ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ

ಖಾನಾಪುರ:25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಹತ್ಯೆ ಮಾಡಿ ಸಾಗಿಸುತ್ತಿದ ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ 

25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಸಾಗಿಸುತ್ತಿದ  ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ

 

ಖಾನಾಪುರ ಜೂ 18 : ತಾಲೂಕಿನ ಸಾವರಗಾಳಿ ಗ್ರಾಮದ ಮನೆಯ ಬಳಿ ಇರುವ ಹುಲ್ಲಿನ ಬಣವಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಹತ್ಯೆ ಮಾಡಿ ಅದನ್ನು ಹೊರಗಡೆ ಸಾಗಿಸಲು ಪ್ರಯತ್ನಿಸುವಾಗ ಖಾನಾಪುರ ಅರಣ್ಯ ಇಲಾಖೆ ಮತ್ತು ಪೋಲಿಸ ಅರಣ್ಯ ದಳ ಸಂಯುಕ್ತವಾಗಿ ದಾಳಿ ಮಾಡಿ ಮಾಲು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಶಿಂಧೋಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಪತಿ ಆರೋಪಿ ಮೋಹನ ದಾರಪ್ಪ ಪಾಟೀಲ(41) ವಶಕ್ಕೆ ಪಡೆದು ಕೊಂಡ ಘಟನೆ ನಡೆದಿದೆ. ಆರೋಪಿಯನ್ನು ನ್ಯಾಯಾದೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಅರಣ್ಯ ಕಾಯ್ದೆ 1972 ವೈಡ್‍ಲೈಫ್ ಸಂರಕ್ಷಣೆ ಕಾಯ್ದೆ 9 ಮತ್ತು 51 ಕಳ್ಳ ಬೇಟೆ ನಿಯಂತ್ರಣ ಮತ್ತು ಅರಣ್ಯ ಕಾಯ್ದೆ 1963 ಅಡಿಯಲ್ಲಿ 84,86,87 ದಾಖಲಿಸಲಾಗಿದೆ. ಸಿಬ್ಬಂದಿಗೆ ಶನಿವಾರ ತಡರಾತ್ರಿ 1 ಗಂಟೆಗೆ ಮಾಹಿತಿ ದೋರೆತಾಗ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಡಿಎಫ್‍ಒ ಬಿ.ವಿ.ಪಾಟೀಲ ಮತ್ತು ಖಾನಾಪುರ ಎಸಿಎಫ್ ಸಿ.ಬಿ.ಪಾಟೀಲ ಮಾರ್ಗದರ್ಶನದಲ್ಲಿ ಖಾನಾಪುರ ವಲಯ ಅರಣ್ಯಾಧಿಕಾರಿ ಎಸ್.ಎಸ್.ನಿಂಗಾಣಿ ನೇತೃತ್ವದಲ್ಲಿ ರಾತ್ರಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಬೆಳಗಾವಿ ಪೋಲಿಸ ಅರಣ್ಯ ದಳ ಪಿಎಸ್‍ಐ ಕೆ.ಎಸ್.ಕೊಚರಿ,ಡೆಪ್ಯೂಟಿ ಆರ್‍ಎಫ್‍ಒ ಎಚ್.ಎ.ಶೇಖ,ಮಲ್ಲೇಶಪ್ಪ ಬೆನಕಟ್ಟಿ ಸಿಬ್ಬಂದಿ ಮಹೇಶ ಬ್ಯಾಕೂಡ,ಎಸ್.ವೈ.ಬಸಕ್ರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಎಸಿಎಫ್ ಸಿ.ಬಿ.ಪಾಟೀಲ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡುವದಾಗಲಿ ಶ್ರೀಗಂಧ ಕಳ್ಳತನ ಮಾಡುವದಾಗಲಿ ಅರಣ್ಯ ಸಂಪತ್ತು ಲೂಟಿ ಮಾಡುವವರ ವಿರುದ್ಧ ಅತ್ಯಂತ ಕಟ್ಟು ನಿಟ್ಟಿನ ಕ್ರಮ ಕ್ಯಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

Related posts: