ಸವದತ್ತಿ:ದುಬಾರಿ ಆಗಿರುವ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ದುಬಾರಿ ಆಗಿರುವ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಮುರಗೋಡ ಸೆ 10 : ದುಬಾರಿಯಾಗಿರುವ ತೈಲ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಕರವೇ ಕಾರ್ಯಕರ್ತರು ಉಪ ತಹಶೀಲ್ದಾರ್ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ಅರ್ಪಿಸಿದರು
ಕಳೆದ ಕೆಲವು ವರ್ಷಗಳಿಂದ ಪೆಟ್ರೋಲ ಹಾಗೂ ಡಿಜೈಲ ಬೆಲೆ ದುಬಾರಿಯಾಗುತ್ತಿದ್ದು ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ ಕೇಂದ್ರ ಸರ್ಕಾರವು ಹಲವಾರು ಮಹತ್ವದ ಬದಲಾವಣೆಗಳನ್ನು ತರುತ್ತಿದೆ ಎಂದು ಹೇಳುತ್ತಲೆ ತೆರೆಮರೆಯಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ ಹಾಗೂ ಡಿಜೈಲ ಬೆಲೆಯನ್ನು ಏರಿಸತ್ತಾ ಹೋಗುತ್ತಿದೆ ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಕೇಂದ್ರ ಸರಕಾರ ತೈಲ ಬೆಲೆ ಇಳಿಸಲು ಕ್ರಮ ಕೈಗೋಳ್ಳಬೇಕೆಂದು ಕರವೇ ಮನವಿಯಲ್ಲಿ ಎಚ್ಚರಿಸಿದ್ದೆ
ಈ ಸಂದರ್ಭದಲ್ಲಿ ಕರವೇ ಸವದತ್ತಿ ತಾಲೂಕಾಧ್ಯಕ್ಷ ಉದಯ ಚಿಕ್ಕನವರ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು