ಮೂಡಲಗಿ:ಗುರು ಪರಂಪರೆಯಿಂದಾಗಲೂ ಗುರುವಿಗೆ ಮಹತ್ವದ ಸ್ಥಾನವಿದೆ : ಡಾ. ಮಹದೇವ ಜಿಡ್ಡಿಮನಿ
ಗುರು ಪರಂಪರೆಯಿಂದಾಗಲೂ ಗುರುವಿಗೆ ಮಹತ್ವದ ಸ್ಥಾನವಿದೆ : ಡಾ. ಮಹದೇವ ಜಿಡ್ಡಿಮನಿ
ಮೂಡಲಗಿ ಸೆ 6 : ಶಿಕ್ಷಕ ವೃತ್ತಿ ಪವಿತ್ರವಾದದ್ದು, ಗುರು ಪರಂಪರೆಯಿಂದಾಗಲೂ ಗುರುವಿಗೆ ಮಹತ್ವದ ಸ್ಥಾನವಿದೆ. ಯಾವುದೇ ವ್ಯಕ್ತಿ ಯಶಸ್ವಿ ಜೀವನ ಹಾಗೂ ಗುರಿಯನ್ನು ಮುಟ್ಟ ಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದು ಸಾಹಿತಿ ಡಾ. ಮಹದೇವ ಜಿಡ್ಡಿಮನಿ ಹೇಳಿದರು.
ಅವರು ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರು ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸನಾತನ ಕಾಲದಿಂದಲು ವಿಶ್ವಕ್ಕೆ ಗುರು ಪರಂಪರೆಯನ್ನು ಪರಿಚಯಿಸಿಕೊಟ್ಟ ದೇಶ ಭಾರತವಾಗಿದೆ. ದೇಶ ಕಂಡಂತಹ ಮಹಾನ್ ದಾರ್ಶನಿಕರಲ್ಲಿ ಡಾ. ರಾಧಾ ಕೃಷ್ಣರು ಒಬ್ಬರು, ಅವರ ಜೀವನ ಶೈಲಿ ತಮ್ಮ ವಿದ್ಯಾರ್ಥಿಗಳಿಗಾಗಿ ಅವರು ನೀಡಿದ ಕೊಡುಗೆಗಳು ಅಪಾರವಾಗಿವೆ. ರಷ್ಯಾದ ಪ್ರಖರ ಪ್ರಧಾನಿ ಸ್ಟಾಲಿನ್ರು ಕೂಡಾ ಇವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರೆಂದು ಹೇಳಿದರು.
ಗುರು ಶಿಷ್ಯ ಪರಂಪರೆಯಲ್ಲಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ದೇಶ ಸದೃಢವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಬದಲಾಯಿಸಲು ಸಾದ್ಯವಾಗುವದು. ರೈತ ಸೈನಿಕ ಶಿಕ್ಷಕ ವೃತ್ತಿಗಳು ಜಗತ್ತಿನ ಶ್ರೇಷ್ಠ ಸೇವಾ ಕಾರ್ಯಗಳಾಗಿದ್ದು, ದೇಶದ ಭದ್ರತೆ ಸಲುವಾಗಿ ಪಣ ತೊಟ್ಟು ಈ ತರಬೇತಿ ಕೇಂದ್ರಕ್ಕೆ ಆಗಮಿಸಿದ್ದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಡಾ. ರಾಧಾಕೃಷ್ಣ ಅವರ ಜೀವನ ಚರಿತ್ರೆಯನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಎಲ್.ಎಲ್.ವ್ಯಾಪಾರಿ, ಎಸ್.ಐ ಪತ್ತಾರ, ಮುಕ್ಕುಂದ ಕುಲಕರ್ಣಿ ಮಾತನಾಡಿ, ಶಿಕ್ಷಕ ವೃತ್ತಿ, ಗುರುವಿಗೆ ಶಿಷ್ಯಂದಿರು ನೀಡುವ ಕೊಡುಗೆಗಳು ಹಾಗೂ ಇಂದಿನ ಸಮಾಜ ಗುರುವನ್ನು ಸ್ಮರೀಸುವ ರೀತಿಯನ್ನು ವಿವರಿಸಿದರು.
ಸಮಾರಂಭದಲ್ಲಿ ಕರುನಾಡು ಸಂಸ್ಥೆಯ ಸಂಚಾಲಕ ಶಂಕರ ತುಕ್ಕನ್ನವರ, ಕೆ.ಎಲ್.ಮೀಶಿ, ಅಸ್ಕರ್ ಇನಾಮದಾರ, ಅರುಣ ನುಚ್ಚುಂಡಿ, ಹೀನಾ ಪಟೇಲ್, ಶೃತಿ ಮಾನೆ ಹಾಗೂ ಸಿಬ್ಬಂದಿ ವರ್ಗ ಮತ್ತು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ವಿಠ್ಠಲ ದತ್ತವಾಡೆ ನಿರೂಪಿಸಿದರು. ನವೀನ ಹಿರೇಮಠ ಸ್ವಾಗತಿಸಿ ಅಭಿಷೇಕ ಕಾಖಂಡಕಿ ವಂದಿಸಿದರು.