ಸವದತ್ತಿ:ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ
ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ
ಸವದತ್ತಿ ಅ 31 : ದಿನಾಂಕ 06-09-2018 ರಂದು ಬೆಳ್ಳಿಗ್ಗೆ 11-00 ಗಂಟೆಗೆ ಶಿಕ್ಷಣ ಇಲಾಖೆಯ ಪದವೀಧರ ಶಿಕ್ಷಕರ ನೇಮಕಾತಿ ನಿಯಾಮಾವಳಿಗಳ ವಿರುದ್ಧ ಸಾವಿರಾರು ಸಂಖ್ಯೆಯ ನೊಂದ ಅಭ್ಯರ್ಥಿಗಳು ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಬೇಡಿಕೆಪತ್ರವನ್ನು ಸಲ್ಲಿಸಲಿದ್ದಾರೆ.
ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಡಿಡಿಪಿಆಯ್ ಕಛೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆಂದು ಕರವೇ ಜಿಲ್ಲಾ ಘಟಕ ಅಧ್ಯಕ್ಷ ಮಹಾದೇವ ತಳವಾರ, ಜಿಲ್ಲಾ ಯುವ ಘಟಕ ಅಧ್ಯಕ್ಷ ದೀಪಕ್ ಗುಡಗನಟ್ಟಿ, ಕೃಷ್ಣಾ ಖಾನಪ್ಪನವರ , ಸವದತ್ತಿ ತಾಲೂಕ್ ಘಟಕ ಅಧ್ಯಕ್ಷ ಉದಯ ಚಿಕ್ಕಣ್ಣವರ, ತಾಲೂಕಾ ಸಂಚಾಲಕರಾದ ಮಹಾದೇವ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜ ವಿಜ್ಞಾನ ಹಾಗೂ ಇತರೆ ವಿಷಯವಾರು ಅರ್ಹತೆ ಪಡೆದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹಾಗೂ ಮಾಹಿತಿಗಾಗಿ ಈ ಕೆಳಕಂಡ ಅಭ್ಯರ್ಥಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಎ.ಬಿ.ಬಡಿಗೇರ 6362686971 ಎ.ಬಿ.ಬಿಲಕಂಚಿ 8970005372 ಎಫ್.ಎ.ಪಚ್ಚಿನವರ 7337669582 ಎಸ್.ವ್ಹಿ.ದೇಶನೂರ 6360143822 ಎ.ಜಿ,ಕಮತಗಿ 9686226418.
ಪ್ರಮುಖ ಬೇಡಿಕೆಗಳು:
ಎ) ಪ್ರಸ್ತುತ ಸರ್ಕಾರದ ನೇಮಕಾತಿಯಲ್ಲಿ ನಿಯಮಗಳು ಗೊಂದಲಗಳಿಂದ ಕೂಡಿದ್ದು, ಇದರಿಂದಾಗಿ ಡಿಎಡ್ ಮುಗಿಸಿ ಬಾಹ್ಯ ಶಿಕ್ಷಣದ ಮೂಲಕ ಪದವಿ ಪಡೆದ ಅಭ್ಯರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಪದವಿ ಶೇ.25% ಅಂಕಗಳನ್ನು ಶೇ.10% ಕ್ಕೆ ಇಳಿಸಿ, ಸಿಇಟಿಯ ಶೇ.ಅಂಕವನ್ನು 35% ರಿಂದ 50% ಕ್ಕೆ ಹೆಚ್ಚಿಸಬೇಕು.
ಬಿ) 10 ಸಾವಿರ ನೇಮಕಾತಿಯಲ್ಲಿ 6 ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಉಳಿಯಲಿದ್ದು,ಆ ಹುದ್ದೆಗಳನ್ನು “ ಸಾಮಾನ್ಯ ಶಿಕ್ಷಕ” ಹುದ್ದೆಗಳನ್ನಾಗಿ ಮಾರ್ಪಡಿಸಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ನೇಮಕ ಮಾಡಿಕೊಳ್ಳಬೇಕು.
ಸಿ)4 ಸಾವಿರ ಹೊಸ ಹುದ್ದೆಗಳ ನೇಮಕಾತಿ ಮಾಡಲು ಸರ್ಕಾರ ಅನುಮತಿ ನೀಡಿದ್ದು. ಈ ಎಲ್ಲ ಹುದ್ದೆಗಳನ್ನು ಪ್ರಸ್ತುತ 10 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಸೇರ್ಪಡೆ ಮಾಡಿ ಅರ್ಹತೆ ಪಡೆದ ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
ಡಿ) 2500 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದಾರೆಂದು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ಸರ್ಕಾರಕ್ಕೆ ತಿಳಿಸಿದ್ದಾರೆ.ಇದರ ಕುರಿತಾಗಿ ಸರಿಯಾದ ಸ್ಪಷ್ಟಿಕರಣ ನೀಡಬೇಕು.
ಇ) ಪ್ರತಿ ಜಿಲ್ಲಾವಾರು ಹಾಗೂ ವಿಷಯವಾರು ಅರ್ಹತೆ ಪಡೆದವರ ಅಂಕಿ ಸಂಖ್ಯೆಗಳನ್ನು ಬಹಿರಂಗ ಪಡಿಸಬೇಕು. ಎಂಬ ಬೇಡಿಕೆಗಳನ್ನು ಇಡೆರಿಸುವಂತೆ ಆಗ್ರಹಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ