ಗೋಕಾಕ:ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ
ಪರಸ್ಪರ ಸಹಬಾಳ್ವೆಯಿಂದ ಬಾಳಿ : ಇಫ್ತಯಾರ್ ಕೂಟದಲ್ಲಿ ಭಾಗವಹಿಸಿದ ಎಐಸಿಸಿ ಕಾರ್ಯದರ್ಶಿ ಸತೀಶ
ಗೋಕಾಕ ಜೂ 10: ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ನೂತನ ಎಐಸಿಸಿ ಕಾರ್ಯದರ್ಶಿ ಸತೀಶ ಹೇಳಿದರು
ಅವರು ಶನಿವಾರ ಸಾಯಂಕಾಲ ನಗರದ ಮೋಮಿನ ಗಲ್ಲಿ (ಗುರುವಾರ ಪೇಠ) ದಲ್ಲಿ ಏರ್ಪಡಿಸಿದ ಇಫ್ತಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು
ಪವಿತ್ರ ರಂಜಾನ್ ತಿಂಗಳಲ್ಲಿ ಪ್ರತಿಯೋಬ್ಬರು ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ನೊಂದವರ ಬಾಳಿಗೆ ಬೆಳಕಾಗಬೇಕು ಆ ದಿಸೆಯಲ್ಲಿ ಎಲ್ಲ ಸಮಾಜಬಾಂಧವರು ಕಾರ್ಯಪ್ರವೃತರಾಗಬೇಕೆಂದು ಸತೀಶ ಹೇಳಿದರು
ಇದೇ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಮುಸ್ಲಿಂ ಸಮಾಜದ ಹಿರಿಯರು ಸತ್ಕರಿಸಿದರು
ಇಫ್ತಯಾರ್ ಕೂಟದಲ್ಲಿ ಮಾಜಿ ನಗರಾದಧ್ಯಕ್ಷ ಎಸ್.ಎ.ಕೋತವಾಲ, ಅಬ್ದುಲರಹೇಮಾನ ದೆಸಾಯಿ, ಫಾರೂಕ್ ಚೌಗಲಾ, ಡಿ.ಯು. ಅತ್ತಾರ, ಇಲಾಹಿ ಖೈರದಿ ಮಲೀಕ ಪೈಲವಾನ, ರಿಯಾಜ ಚೌಗಲಾ, ಆರೀಪ ಪೀರಜಾದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು