ಗೋಕಾಕ:ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ

ಕಿರಿಯ ಸಹೋದರ ಲಖನ್ ಜೊತೆ ನಾಮಪತ್ರ ಸಲ್ಲಿಸುತ್ತಿರುವ ಸಚಿವ ರಮೇಶ ಜಾರಕಿಹೊಳಿ
ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ
ಗೋಕಾಕ ಏ 20 : ಸತತ ನಾಲ್ಕು ಅವಧಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿರುವ ಸಚಿವ ರಮೇಶ ಜಾರಕಿಹೊಳಿ ಅವರು ಐದನೇಯ ಭಾರಿ ತಮ್ಮ ನಾಮಪತ್ರ ಸಲ್ಲಿಸಿದರು .
ತಮ್ಮ ಸಹೋದರ ಲಖನ್ ಮತ್ತು ಬೇರಳೆಣಿಕೆ ಬೆಂಬಲರೊಂದಿಗೆ ಇಲ್ಲಿಯ ಮಿನಿ ವಿಧಾನಸೌದ ಕ್ಕೆ ಆಗಮಿಸಿದ ಸಚಿವ ರಮೇಶ ಶುಕ್ರವಾರ ಶುಭ ತರುವ ವಾರ ಹಾಗೂ ಮೂಹೂರ್ತ ಒಳೆಯದಿದೆ ಎಂಬ ಕಾರಣಕ್ಕೆ ಹಾಲಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ದಿನೇಶಕುಮಾರ ಅವರಿಗೆ ಸಲ್ಲಿಕೆ ಮಾಡಿದರು
ಮೂಹರ್ತ ಪ್ರಕಾರ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು 23 ರಂದು ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ .