RNI NO. KARKAN/2006/27779|Monday, June 16, 2025
You are here: Home » breaking news » ಬೆಳಗಾವಿ:ಪ್ರತಿಭಾವಂತರನ್ನು ಗುರುತಿಸಿ ಮಖ್ಯವಾಹಿನಿಗೆ ತರುವುದು ಎಸ್.ಜೆ ಫೌಂಡೇಶನ್ ಪ್ರಮುಖ ಧ್ಯೇಯ : ಪ್ರಿಯಾಂಕಾ

ಬೆಳಗಾವಿ:ಪ್ರತಿಭಾವಂತರನ್ನು ಗುರುತಿಸಿ ಮಖ್ಯವಾಹಿನಿಗೆ ತರುವುದು ಎಸ್.ಜೆ ಫೌಂಡೇಶನ್ ಪ್ರಮುಖ ಧ್ಯೇಯ : ಪ್ರಿಯಾಂಕಾ 

ಪ್ರತಿಭಾವಂತರನ್ನು ಗುರುತಿಸಿ ಮಖ್ಯವಾಹಿನಿಗೆ ತರುವುದು  ಎಸ್.ಜೆ ಫೌಂಡೇಶನ್ ಪ್ರಮುಖ ಧ್ಯೇಯ : ಪ್ರಿಯಾಂಕಾ

ಬೆಳಗಾವಿ ಮಾ 12: ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡಿಪಾಗಿಟ್ಟ ಮಹನೀಯರನ್ನು  ಇಂದಿನ ಯುವ ಪೀಳಿಗೆಯು ಅರಿಯಬೇಕಾಗಿದೆ ಎಂದು  ಸತೀಶ ಜಾರಕಿಹೊಳಿ ಫೌಂಡೇಷನ್ ಮುಖ್ಯಸ್ಥೆ   ಪ್ರಿಯಾಂಕಾ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಬೆನೆನ್ ಸ್ಮಿತ್ ಹೈಸ್ಕೂಲ್ ಮೈದಾನದಲ್ಲಿ ರವಿವಾರ ಸಂಜೆ ಏರ್ಪಡಿಸಿದ್ದ 5 ಸತೀಶ ಶುಗರ್ಸ್  ಅವಾರ್ಡ್ಸ್ ಬಹುಮಾನ ವಿತರಣೆ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುದ್ಧ, ಬಸವ ಅಂಬೇಡ್ಕರ್ ಅವರ ಮಾರ್ಗದಲ್ಲಿ ತಮ್ಮ ತಂದೆ, ಶಾಸಕ ಸತೀಶ ಜಾರಕಿಹೊಳಿ ಅವರು ನಡೆಯುತ್ತಿದ್ದಾರೆ ಅವರೊಂದಿಗೆ ಕೈ ಜೋಡಿಸಿ ಸಮಾಜಿಕ ಕಾರ್ಯಗಳಲ್ಲಿ ತಾವೂ ಭಾಗವಹಿಸುವುದಾಗಿ ಅವರು ಹೇಳಿದರು.

ನಗರ  ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭಾವಂತರನ್ನು ಗುರುತಿಸಿ ಮಖ್ಯವಾಹಿನಿಗೆ ತರುವುದು  ಫೌಂಡೇಶನ್  ಪ್ರಮುಖ ಧ್ಯೇಯವಾಗಿದೆ.ಈ ಬಾರಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 1200 ಸ್ಪರ್ಧಾಳುಗಳು ಭಾಗವಹಿಸಿದ್ದು 450 ಜನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.  39.35 ಲಕ್ಷ ನಗದು ಬಹುಮಾನವನ್ನು ವಿಜೇತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ತಮ್ಮ ತಂದೆ ಅವರು ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳನ್ನು ಏರ್ಪಡಿಸುವ ಮೂಲಕ, ಜಿಲ್ಲೆಯ ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಒಂದು ಉತ್ತಮ ಕಾರ್ಯ ಮಾಡುತ್ತಿ್ದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಸಿದರು.

ಕಾಯ್ರಕ್ರಮದ  ಅಂಗವಾಗಿ ಮಾಡರ್ನ ಮೆಲೋಡೀಸ್ ಆರ್ಕೆಸ್ಟ್ರಾ ರಿಯಾಜ್  ಚೌಗಲಾ ನೇತೃತ್ವದಲ್ಲಿ ನಡೆದ ಸಂಗೀತ ರಸಮಂಜರಿ ಪ್ರೇಕ್ಷಕರ ಮನ ಗೆದ್ದಿತು. ಸಂಸ್ಥೆಯ ಕಲಾವಿದರು ನುಡಿಸಿದ ಸಿಂಫೋನಿಯಂತೂ ಎಲ್ಲರೂ ತಲೆದೂಗುವಂತೆ ಮಾಡಿತು.

ವೇದಿಕೆ ಮೇಲೆ ರಾಹುಲ ಸತೀಶ ಜಾರಕಿಹೊಳಿ, ಬೆಳಗಾವಿ ಜಿ.ಪಂ. ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಆಸೀಫ್ ಮುಲ್ಲಾ ಇದ್ದರು

Related posts: