RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ: ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ

ಬೆಳಗಾವಿ: ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ 

ಮತ್ತೆ ಖ್ಯಾತೆ ತಗೆದ ಎಂಇಎಸ : ರೋಷನ್ ಬೇಗ್ ಎಚ್ಚರಿಗೆ ಡೋಂಟ್ ಕೇರ್ ಎಂದ ಸರೀತಾ ಪಾಟೀಲ

 

ಬೆಳಗಾವಿ ಮೇ 23: ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ನಿನ್ನೇಯಷ್ಟೆ ಎಂಇಎಸ ನಾಯಕರಿಗೆ ನೀಡಿದ ಎಚ್ಚರಿಕೆ ಬೆನ್ನಲ್ಲೇ ನಾಡವಿರೋಧಿ ಎಂಇಎಸ ಮುಖಂಡರು ಮತ್ತೆ ತನ್ನ ಬಾಲ ಬಿಚ್ಚಿ ಕನ್ನಡ,ಕರ್ನಾಟಕವನ್ನು ಅವಮಾನಿಸಿದ್ದಾರೆ.

ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿ.ಪಂ ಸದಸ್ಯೆ ಸರಸ್ವತಿ ಎನ್ನುವರು, ನಾವು ಮಹಾರಾಷ್ಟ್ರದವರು. ನಮ್ಮ ರಕ್ತ ಹರಿದ್ರು ಚಿಂತೆಯಿಲ್ಲ. ರಾಜ್ಯ ಸರ್ಕಾರ ನಮ್ಮ ಸದಸ್ಯತ್ವ ರದ್ದು ಮಾಡಿದ್ರು ಸಹ ನಾವು ಜೈ ಮಹಾರಾಷ್ಟ್ರ ಎಂದು ಹೇಳುತ್ತೇವೆ ಎನ್ನುವ ಮೂಲಕ ಉದ್ಧಟತನ ಮೆರೆದಿದ್ದಾರೆ.  

ನಾಡದ್ರೋಹಿಗಳ ಈ ಜೈಕಾರದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗಾಗ ತಕರಾರು ತೆಗೆಯುವ ಎಂಇಎಸ್‌ ಬಗ್ಗೆ ರೋಷನ್‌ ಬೇಗ್‌, ನಿನ್ನೆ ನಡೆದ ಪಾಲಿಕೆಯ ಸಭೆಯಲ್ಲಿ ನಾಡವಿರೋಧಿ ಚಟುವಟಿಕೆ ನಡೆಸುವವರ ಸದಸ್ಯತ್ವ ರದ್ದು ಮಾಡುವುದಾಗಿ ಹೇಳಿದ್ದರು. ಅಲ್ಲದೆ ಇದಕ್ಕಾಗಿ ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು. 

ಈ ಹಿನ್ನೆಲೆ ಮಾಜಿ ಮೇಯರ್ ಸರೀತಾ ಪಾಟೀಲ ಹಾಗೂ ಬೆಳಗಾವಿ ತಾಲೂಕಿನ ಉಚಗಾಂವ್‌ ಜಿ.ಪಂ ಸದಸ್ಯ ಸರಸ್ವತಿ ಪಾಟೀಲ ಈ ನಾಡವಿರೋಧಿ ಹೇಳಿಕೆ ನೀಡಿದ್ದಾರೆ. 

ಎಚ್ಚರಿಕೆ ನೀಡಿ ಹೋಗಿರುವ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ನುಡಿದಂತೆ ನಡೆದು ಉದ್ದಘಟತನ ತೋರಿ ಮಹಾ ರಾಜ್ಯದ ಪರ ನಿಲುವಿಗೆ ಬದ್ದವಾಗಿರುವುದಾಗಿ ಹೆಳುತ್ತಿರುವ ನಾಡ ವಿರೋಧಿ ಎಂಇಎಸ ನ ಸರೀತಾ ಪಾಟೀಲ ಮತ್ತು ಜಿಪಂ ಸದ್ಯಸೆ ಸರಸ್ವತಿ ಪಾಟೀಲ ಅವರ ಮೇಲೆ ನಿರ್ಧಾಕ್ಷಣಿಯ ಕ್ರಮ ಜರುಗಿಸಲು ಮುಂದಾಗಬೇಕೆಂದು ಕನ್ನಡ ಪರ ಸಂಘಟನೆ ಮುಂಖಡ ಖಾನಪ್ಪನವರ ಆಗ್ರಹಿಸಿದ್ದಾರೆ.

Related posts: