ಗೋಕಾಕ:ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಡಾ. ಸುರೇಶ ಹನಗಂಡಿ ನೇಮಕ
ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಡಾ. ಸುರೇಶ ಹನಗಂಡಿ ನೇಮಕ
ಗೋಕಾಕ ಫೆ 22: ತಾಲೂಕಿನ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಿಸಿ ಕುಲಸಚಿವರು 21-2-2018 ರಂದು ಆದೇಶ ಹೊರಡಿಸಿದ್ದಾರೆ.
ಡಾ. ಸುರೇಶ ಹನಗಂಡಿ ಅವರನ್ನು ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲ ಹಾಗೂ ಸಿಬ್ಬಂಧಿ ವರ್ಗದವರು ಸನ್ಮಾನಿಸಿದರು. ಸನ್ಮಾನ ಸಮಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಎಂ.ಬಿ.ಕುಲಮೂರ, ಶಂಕರ ನಿಂಗನೂರ, ಕೆ.ಎಸ್.ಪರವ್ವಗೋಳ, ಎಸ್.ಎಂ.ಐಹೊಳೆ, ಡಿ.ಎಸ್.ಹುಗ್ಗಿ, ಕೆ.ಆರ್.ಡೊಣವಾಡ, ಬಿ.ಕೆ.ಸೊಂಟನವರ ಹಾಗೂ ಕಾರ್ಯಾಲಯದ ಸಿಬ್ಬಂಧಿಗಳಾದ ಬಿ.ಎಂ.ಶೀಗಿಹಳ್ಳಿ, ಎನ್.ಎಸ್.ಪಾಟೀಲ, ಎಂ.ಎಸ್.ಗೋರಗುದ್ಧಿ ಮುಂತಾದವರು ಇದ್ದರು.