ಗೋಕಾಕ:ವರಕವಿ ದ. ರಾ. ಬೇಂದ್ರೆ ಜಯಂತಿ: ಉಪನ್ಯಾಸ ಹಾಗೂ ಬೇಂದ್ರೆ ವಿರಚಿತ ಗೀತೆಗಳ ಕಾರ್ಯಕ್ರಮ
ವರಕವಿ ದ. ರಾ. ಬೇಂದ್ರೆ ಜಯಂತಿ: ಉಪನ್ಯಾಸ ಹಾಗೂ ಬೇಂದ್ರೆ ವಿರಚಿತ ಗೀತೆಗಳ ಕಾರ್ಯಕ್ರಮ
ಗೋಕಾಕ ಜ 29: ವರಕವಿ ದ. ರಾ. ಬೇಂದ್ರೆ ಜಯಂತಿ ಅಂಗವಾಗಿ ಸಿರಿಗನ್ನಡ ತಾಲೂಕಾ ವೇದಿಕೆ ಗೋಕಾಕ ಆಶ್ರಯದಲ್ಲಿ ಬುಧವಾರ ದಿನಾಂಕ 31-01-2018 ರಂದು ಬೆಳಿಗ್ಗೆ 10-30 ಗಂಟೆಗೆ ಉಪನ್ಯಾಸ ಹಾಗೂ ಬೇಂದ್ರೆ ವಿರಚಿತ ಗೀತೆಗಳ ಪ್ರಸ್ತುತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಗೋಕಾಕದ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ, ಹಳೇ ತಹಶೀಲ್ದಾರ ಕಛೇರಿ, ಗೋಕಾಕದಲ್ಲಿ ಜರಗುವುದು.
ಅಧ್ಯಕ್ಷತೆಯನ್ನು ತಾಲೂಕಾ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಶ್ರೀ ಈಶ್ವರ ಮಮದಾಪೂರ ವಹಿಸುವರು. ಉದ್ಘಾಟನೆಯನ್ನು ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಗೋಕಾಕದ ಪ್ರಾಚಾರ್ಯರಾದ ಪ್ರೋ. ಮಹೇಶ ವಾಯ್. ಕಂಬಾರ ನೆರವೇರಿಸುವರು. “ಬೇಂದ್ರೆ ಕಾವ್ಯದಲ್ಲಿ ಭಾವಗೀತೆಗಳ ಸೊಗಸು” ಎಂಬ ವಿಷಯದ ಮೇಲೆ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೋ. ಮಹಾನಂದಾ ಪಾಟೀಲ ಉಪನ್ಯಾಸ ನೀಡುವರು. ಶ್ರೀಮತಿ ಜ್ಯೋತಿ ಕುರೇರ ಹಾಗೂ ಸಂಗಡಿಗರು ಬೇಂದ್ರೆ ವಿರಚಿತ ಗೀತೆಗಳ ಗಾಯನ ಪ್ರಸ್ತುತ ಪಡಿಸುವರು. ಮುಖ್ಯ ಅತಿಥಿಗಳಾಗಿ ದ್ರಾವಿಡ ಭಾರತ ಪತ್ರಿಕೆಯ ಸಂಪಾದಕರು ಹಾಗೂ ಕರ್ನಾಟಕ ಪತ್ರಿಕಾ ಪರಿಷತ್ನ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಕುರೇರ, ಗೋಕಾಕ ತಾಲೂಕಾ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ವಡೆಯರ, ಗಾಂಧಿ ಅಕ್ಯಾಡೆಮಿ ಸಂಸ್ಥಾಪಕರಾದ ಶ್ರೀ ಎಮ್. ಐ. ಜೋತಾವರ ಉಪಸ್ಥಿತರಿರುವರು.