ಗೋಕಾಕ:ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ : 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಲಕ್ಮೀ ನಾರಾಯಣ ಭಟ್ ಅಭಿಮತ
ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ : 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಲಕ್ಮೀ ನಾರಾಯಣ ಭಟ್ ಅಭಿಮ
ಗೋಕಾಕ ಜ 20: ಪ್ರತಿಭೆಗಳನ್ನು ತೋರ್ಪಡಿಸಲು ಹಿಂತಹ ದೊಡ್ಡ ವೇದಿಕೆ ದೊರಕಿಸಿ ಕೊಟ್ಟ ಸಾಂಸ್ಕೃತಿಕ ರಾಯಭಾರಿ ಸತೀಶ ಜಾರಕಿಹೊಳಿ ಅವರ ಕಾರ್ಯ ದೇಶಕ್ಕೆ ಮಾದರಿ ಎಂದು ಶಿರಸಿಯ ಕರ್ನಾಟಕ ಛಾಯಾಚಿತ್ರ ಸಂಘದ ವಲಯ ಅಧ್ಯಕ್ಷರಾದ ಲಕ್ಮೀ ನಾರಾಯಣ ಭಟ್ ಅಭಿಪ್ರಾಯ ಪಟ್ಟರು
ಅವರು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಮೈಸೂರು ಅರಮನೆ ಮಾದರಿಯ ಭವ್ಯ ವೇದಿಕೆಯಲ್ಲಿ ನಡೆಯುತ್ತಿರುವ 17ನೇ ಸತೀಶ ಶುಗರ್ರ್ಸ್ ಅವಾಡ್ರ್ಸ್ ಮೂರನೇ ದಿನದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು
ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಜ್ಯ,ರಾಷ್ಟ್ರ ಮಟ್ಟಕ್ಕೆ ಕರೆದೋಯುತ್ತಿರುವ ಸತೀಶ ಶುಗರ್ಸ ವೇದಿಕೆ ಯಾವುದೇ ಫೀಲ್ಮಂ ಫೇರ್ ಅವಾರ್ಡ್ಸ ಗಿಂತ ಕಡಿಮೆ ಇಲ್ಲಾ ಹಿಂತಹ ಬೃಹತ್ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸುತ್ತಿರುವ ಈ ಭಾಗದ ಸಾವಿರಾರು ವಿಧ್ಯಾರ್ಥಿಗಳು ಪುಣ್ಯವಂತರು ಎಂದು ಲಕ್ಮೀ ನಾರಾಯಣ ಹೇಳಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಧುರೀಣ ಮಹಾವೀರ ಮೋಹಿತೆ , ಅಶೋಕ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು