RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ:ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ

ಬೆಳಗಾವಿ:ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ 

ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ

ಬೆಳಗಾವಿ ಜ 9: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಇಂದು ಅದ್ದೂರಿಯಾಗಿ ನಡೆಯಿತು ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ ಪ್ರಧಾನ ಮಾಡಿದರು ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ದಲ್ಲಿ ಸಾದನೆಗೈದ ವಿದ್ಯಾರ್ಥಿಗಳನ್ನು ಸಹ ಪದಕಗಳನ್ನು ನೀಡಿ ಗೌರವಿಸಲಾಯಿತು

ಘಟಿಕೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯಪಾಲ ವಜುಭಾಯ್‌‌ ವಾಲಾ, ಇಸ್ರೋ ಅಧ್ಯಕ್ಷ ಪದ್ಮಶ್ರೀ ಎ.ಎಸ್‌‌.ಕಿರಣ್‌ಕುಮಾರ್ ಹಾಗೂ ಮುಂಬೈನ ಮಹೇಂದ್ರ ಗ್ರೂಪ್‌ ಸಮೂಹದ ಅಧ್ಯಕ್ಷ ಆನಂದ ಮಹಿಂದ್ರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ನವದೆಹಲಿಯ ಅಖಿಲ ಭಾರತ್‌‌ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ಘಟಿಕೋತ್ಸವ ಭಾಷಣ ಮಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಅವಕಾಶಗಳನ್ನ ಸರಿಯಾಗಿ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಹೇಳಿದರು.

ಇನ್ನು ಈ ಬಾರಿಯೂ ಘಟಿಕೋತ್ಸವದಲ್ಲಿ ಹೆಚ್ಚಿನ ಚಿನ್ನದ ಪದಕಗಳನ್ನ ವಿದ್ಯಾರ್ಥಿನಿಯರೆ ಮುಡಿಗೇರಿಸಿಕೊಂಡಿದ್ದಾರೆ. ಚಿಕ್ಕಮಂಗಳೂರಿನ ಆದಿಚುಂಚನಗಿರಿ ಕಾಲೇಜಿನ ವಿದ್ಯಾರ್ಥಿ ಸಚಿನ್ ಕೀರ್ತಿ 13 ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದರೆ, ಅತ್ತ ಐದು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ಬೆಂಗಳೂರಿನ ಬಿ.ಎನ್‌‌.ಎಸ್‌‌ ಕಾಲೇಜಿನ ಪ್ರತ್ಯೂಷಾ, ಬೆಂಗಳೂರಿನ ಶಿರಡಿ ಸಾಯಿ ಕಾಲೇಜಿನ ಬಿಂದು ಎಸ್., ಬೆಳಗಾವಿಯ ಶೇಷರಗಿರಿ ಕಾಲೇಜಿನ ರಜತ್ ಹೊರ್ಗಾತಿ, ಸುಳ್ಯೆಯ ವೆಂಟಕರಮನ ಕಾಲೇಜಿನ ಅರ್ಪಿತಾ ಕೆ.ಎಸ್. 2ನೇ ಸ್ಥಾನ ಪಡೆದುಕೊಂಡಿದ್ದಾರೆ. 

ಅಲ್ಲದೆ 4 ಚಿನ್ನದ ಪದಕ ಪಡೆದ ಬೆಂಗಳೂರಿನ ಆರ್‌.ಎನ್‌‌.ಎಸ್‌‌. ಕಾಲೇಜಿನ ವಿದ್ಯಾರ್ಥಿನಿ ಅಪೂರ್ವ ಶರ್ಮಾ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಹೀಗೆ ಚಿನ್ನದ ಪದಕ ಮುಡಿಗೇರಿಸಿಕೊಂಡ ವಿದ್ಯಾರ್ಥಿಗಳು ಐಎಎಸ್‌ ಅಧಿಕಾರಿ ಆಗಬೇಕು, ಮೇಕ್‌ ಇನ್ ಇಂಡಿಯಾಗೆ ಕೈಜೋಡಿಸುತ್ತೇವೆ ಅಂತ ತಮ್ಮ ಹೆಬ್ಬಯಕೆಯನ್ನ ವ್ಯಕ್ತಪಡಿಸಿದರು

Related posts: