ಗೋಕಾಕ:ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಗೋಕಾಕಿನ ಕ್ಯಾಂಟರ್ : ಇಬ್ಬರಿಗೆ ಗಂಭೀರ ಗಾಯ ಚಾಲಕನ ಸ್ಥಿತಿ ಚಿಂತಾಜನಕ
ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಗೋಕಾಕಿನ ಕ್ಯಾಂಟರ್ : ಇಬ್ಬರಿಗೆ ಗಂಭೀರ ಗಾಯ ಚಾಲಕನ ಸ್ಥಿತಿ ಚಿಂತಾಜನಕ
ಗೋಕಾಕ ನ 18 : ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕ್ಯಾಂಟರ್ ಕೆಳಗೆ ಬಿದ್ದ ಘಟನೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ಮುಂದೆ ನಡೆದಿದೆ.
ಬೆಳಗಾವಿ ಯಿಂದ ಬೆಂಗಳೂರಿಗೆ ಬರುತ್ತಿದ್ದ ಕ್ಯಾಂಟರ್ ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ. ಶುಕ್ರವಾರ ಮುಂಜಾನೆ 7.15ಕ್ಕೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯವಾಗಿ ಸ್ಥಿತಿ ಚಿಂತಾಜನಕವಾಗಿದೆ .
ಕ್ಯಾಂಟರ್ನಲ್ಲಿ ಕೋಳಿ ತುಂಬಿಕೊಂಡು ಬರಲಾಗುತ್ತಿತ್ತು.
ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರನ್ನು ಜೆಸಿಬಿ ಮೂಲಕ ಮೇಲೆತ್ತಲಾಗಿದೆ. ಗಾಯಾಳು ಕ್ಯಾಂಟರ್ ಚಾಲಕನನ್ನು ಹತ್ತಿರದ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಿಂಗಳಾಪೂರ ಗ್ರಾಮದವರಾದ ಇಬ್ರಾಹಿಂ ಪೀರಜಾದೆ (22) ಶಬ್ಬಿರ ಖಾಜಿ ( 45 ) ಅಲ್ತಾಫ್ ಪೀರಜಾದೆ (20 ) ಎಂಬುವವರು ಕ್ಯಾಂಟರ್ ನಲ್ಲಿದ್ದವರು ಎಂದು ಗುರುತಿಸಲಾಗಿದೆ.
ವೇಗವಾಗಿ ಕ್ಯಾಂಟರ್ ಬಂದಿದ್ದು, ಮುಂದೆ ಟ್ರಾಫಿಕ್ ಜಾಮ್ ಇದೆ ಎಂದು ಚಾಲಕ ಬ್ರೇಕ್ ಹಾಕಲು ಹೋಗಿ ನಿಯಂತ್ರಣ ಸಿಗದೆ ಕ್ಯಾಂಟರ್ ಕೆಳಗೆ ಬಿತ್ತು. ಚಾಲಕನಿಗೆ ಗಾಯವಾಗಿದೆ, ಕ್ಲೀನರ್ ಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಲ್ಲಿದ್ದು ಗಾಯಾಳುಗಳ ಪರಿಸ್ಥಿತಿ ಅವಲೋಕಿಸುತ್ತಿರುವ ಗೋಕಾಕಿನ ಆರೀಪ ಪೀರಜಾದೆ ತಿಳಿಸಿದ್ದಾರೆ.