ಬೆಳಗಾವಿ:ಸರಕಾರಕ್ಕೆ ಸೆಡ್ಡು ಹೊಡೆದ ಮಹಾ ನಾಯಕರು :ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ ಭಾಗಿ
ಸರಕಾರಕ್ಕೆ ಸೆಡ್ಡು ಹೊಡೆದ ಮಹಾ ನಾಯಕರು :ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ ಭಾಗಿ
ಬೆಳಗಾವಿ ನ 13 : ನಗರದಲ್ಲಿ ನಡೆಯುತ್ತಿರುವ ಮಹಾ ಮೇಳಾವದಲ್ಲಿ ಮಹಾರಾಷ್ಟ್ರದ ಮುಖಂಡರನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಮಹಾರಾಷ್ಟ್ರದ ಕೊಲ್ಹಾಪುರ ಸಂಸದ ಧನಂಜಯ ಮಾಡಿಕ ಹಾಗೂ ಚಂದಗಡ ಭಾಗದ ಶಾಸಕಿ ಸಂಧ್ಯಾ ಕುಲಕರ್ಣಿ ಭಾಗವಹಿಸಿ ಸರಕಾರದ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ.
ಕಾರ್ಯಕ್ರಮ ಆರಂಭವಾದ ನಂತರ ಒಂದು ಘಂಟೆ ತಡವಾಗಿ ಆಗಮಿಸಿದ ಇವರು ಬೆರೆ ಬೆರೆ ರಸ್ತೆಗಳ ಮೂಲಕ ಆಗಮಿಸಿದ್ದಾರೆ.
ಇದರಿಂದ ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಬಂದ ನಾಯಕರಿಗೆ ಜಿಲ್ಲಾಡಳಿತ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು