ಗೋಕಾಕ:ಪಕ್ಷ ಬೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿ : ಶಾಸಕ ರಮೇಶ್

ಪಕ್ಷ ಬೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿ : ಶಾಸಕ ರಮೇಶ್
ಘಟಪ್ರಭಾ ಆ 21 : ಪಕ್ಷ ಬೇದ ಮರೆತು ಎಲ್ಲರೂ ಕೂಡಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ಸಿ.ಸಿ, ಕ್ಯಾಮರಾ, ಇಂದಿರಾ ಕ್ಯಾಂಟಿನ್ ಉದ್ಘಾಟನೆ ಹಾಗೂ ಮೃತ್ಯುಂಜಯ ಸರ್ಕಲದಿಂದ ಮಲ್ಲಾಪೂರ ಪಿ.ಜಿ.ಯ ಕಾಳಿಕಾ ದೇವಿ ದೇವಸ್ಥಾನ ವರೆಗಿನ ಮುಖ್ಯ ರಸ್ತೆಯ ನವೀಕರಣ ಕಾರ್ಯಕ್ರಮದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು, ಪಕ್ಷ ಬೇದ ಮರೆತು ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುತ್ತ ಬಂದಿದ್ದೆವೆ. ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ರಾಮಣ್ಣಾ ಹುಕ್ಕೇರಿ ಮಾತನಾಡಿ ಕಡಿಮೆ ದರದಲ್ಲಿ ಬೆಳಗಿನ ಉಪಹಾರ ಮತ್ತು ಮದ್ಯಾಹ್ನ ಭೋಜನವು ಇದರಲ್ಲಿ ಸಿಗುತ್ತದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಇಂದಿರಾ ಕ್ಯಾಂಟಿನ್ ಪ್ರಯೋಜನ ಪಡೆದುಕೊಳ್ಳಬೇಕು. ಕೇವಲ 5 ರೂ ನೀಡಿದರೆ ಉಪಹಾರ ಮತ್ತು 10 ರೂ. ನೀಡಿದರೆ ಊಟವು ಕಡಿಮೆ ದರದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದು, ಗುಣಮಟ್ಟದ ಆಹಾರವು ದೊರೆಯಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಪುರಸಭೆಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ನಂತರ ಶಾಸಕರು ಇಂದಿರಾ ಕ್ಯಾಂಟಿನ್ದಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪರೀಕ್ಷಿಸಿದರು. ನಂತರ ಸನ್ 2023-24 ನೇ ಸಾಲಿನ ಎಸ್.ಎಸ್.ಎಫ್.ಸಿ ಮುಕ್ತನಿಧಿ ಅನುದಾನದ ಇತರೆ ಬಡ ಜನರ ಯೋಜನೆಯಡಿ ಬಿ.ಇ/ ಎಂ.ಬಿ.ಬಿ.ಎಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪಗಳನ್ನು ವಿತರಿಸಲಾಯಿತು. ಘಟಪ್ರಭಾ ಪುರಸಭೆ ವ್ಯಾಪ್ತಿಯ ವಾರ್ಡ ನಂ.7ರಲ್ಲಿ ಸಯ್ಯದ ಜಿಂದನ್ನವರ ಮನೆಯಿಂದ ಗೌಸಖಾನ ಕಿತ್ತೂರಕರರವರ ಮನೆಯವರೆಗೆ ಸಿ.ಸಿ ರಸ್ತೆಗೆ ಭೂಮಿ ಪೂಜೆ ಹಾಗೂ ಪುರಸಭೆಯ ಕೇಲವೂಂದು ಸ್ಥಳದಲ್ಲಿ ಕಿಸೆಗಳ್ಳತನ ಹೆಚ್ಚಾಗುತ್ತಿದ್ದು ಅದನ್ನು ತಡೆಯಲು ಆರು ಕಡೆ ಅಳವಡಿಸಲಾದ ಸಿ.ಸಿ.ಕ್ಯಾಮರಾಗಳನ್ನು ಉದ್ಘಾಟಿಸಲಾಯಿತು.
ಬಹು ದಿನಗಳ ಬೇಡಿಕೆಯಾದ ಘಟಪ್ರಭಾ ಮುಖ್ಯ ರಸ್ಥೆಯು 10-15 ವರ್ಷಗಳ ಹಿಂದೆ ಮಾಡಲಾಗಿತ್ತು. ಇಲ್ಲಿಯ ವರೆಗೆ ರಿಪೇರಿ ಮಾಡುತ್ತ ಬಂದಿದ್ದು, ಈಗ ಈ ರಸ್ತೆಗೆ ನವೀಕರಣದ ಭಾಗ್ಯ ಲಬ್ಯವಾಗಲಿದೆ. ರಸ್ತೆ ಅಗಲಿಕರಣ ಹಾಗೂ ಡಿವೈಡರ ರಸ್ತೆ ಮಾಡುವದರಿಂದ ಟ್ರಾಪಿಕ ಸಮಸ್ಯೆ ನಿವಾರಣೆ ಆಗಲಿದೆ.
ಕಾರ್ಯಕ್ರಮದ ಸನ್ನದಿವಹಿಸಿದ್ದ ಗುಬ್ಬಲ ಗುಡ್ಡ ಮಠದ ಪೀಠಾಧಿಪತಿಗಳಾ ಡಾ. ಮಲ್ಲಿಕಾರ್ಜುನ ಸ್ವಾಮಿಜಿ ಆಶಿರ್ವಚನ ನೀಡಿದರು. ಕರಿಗಾರ ಗುರುಗಳು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಟಿ.ಆರ್. ಕಾಗಲ, ಮುಖ್ಯಾಧಿಕಾರಿ ಶ್ರೀಮತಿ ಎಂ.ಎಸ್ ಪಾಟೀಲ, ಹಿರಿಯರಾದ ಡಿ. ಎಂ. ದಳವಾಯಿ, ರಾಮಣ್ಣ ಹುಕ್ಕೇರಿ, ಈಶ್ವರ ಮಟಗಾರ, ಜಿ.ಎಸ್. ರಜಪೂತ, ರಮೇಶ ತುಕ್ಕಾನಟ್ಟಿ, ಅರವಿಂದ ಬಡಕುಂದ್ರಿ, ಮುಸ್ಲಿಂ ಸಮುದಾಯದ ಹೈದರ ಮನಿಯಾರ, ಮೌಲಾ ಬಾಗವಾನ, ಜಾಹಗೀರ ಬಾಗವಾನ, ದಿಲಾವರ ನದಾಫ, ದಿಲಾವರ ಬಾಳೇಕುಂದ್ರಿ, ಮದಾರಸಾಬ ಜಗದಾಳ, ಮದಾರ ನಾಲಬಂದ, ಪ.ಪಂ ಮಾಜಿ ಸದಸ್ಯರಾದ ಪ್ರವೀಣ ಮಟಗಾರ, ಈರಣ್ಣಾ ಕಲಕುಟಗಿ, ಸಲೀಮ ಕಬ್ಬೂರ, ಮಲ್ಲು ಕೋಳಿ, ನಾಗರಾಜ ಚಚಡಿ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಕರವೇ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ, ಮಹೇಶ ಪಾಟೀಲ, ಹನಮಂತ ಗಾಡಿವಡ್ಡರ, ಶೇಖರ್ ರಜಪೂತ, ನಾಗರಾಜ ನಾಯಿಕ, ಸುರೇಶ ಪಾಟೀಲ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸುಧೀರ ಜೋಡಟ್ಟಿ, ಸುರೇಶ್ ಪೂಜೇರಿ, ಕಾಡಪ್ಪ ಕರೋಶಿ, ಅಪ್ಪಾಸಾಬ ಮುಲ್ಲಾ, ಭರಮಣ್ಣಾ ಗಾಡಿವಡ್ಡರ, ಶೇಖರ ಕುಲಗೂಡ, ಕೃಷ್ಣಾ ಗಂಡವ್ವಗೋಳ, ಕಲ್ಲೋಳ್ಳೆಪ್ಪ ಗಾಡಿವಡ್ಡರ, ಜುಬೇರ ಡಾಂಗೆ, ನವೀನ್ ಉಪ್ಪಾರ, ಲಕ್ಷ್ಮಣ ಮೇತ್ರಿ. ಪುರಸಭೆ ಅಧಿಕಾರಿಗಳಾದ ಯಲ್ಲಪ್ಪ ಚಲುವಾದಿ, ಎನ್.ಎಸ್. ಮಾಲದಿನ್ನಿ, ರಾಜು ಗನಾಚಾರಿ, ರಮೇಶ ಗಂಡವ್ವಗೋಳ, ಮಹಾಂತೇಶ ದೊಡಲಿಂಗಪ್ಪಗೋಳ, ಅಕ್ಷಯ ಮಾನಗಂವಿ, ಇಯರ್ಷಾದಅಲಿ ಜಗದಾಳ, ಶ್ರೀಮತಿ ರಮೇಜಾ ಹುದಲಿ ಸರ್ವ ಸಿಬ್ಬಂದಿ ವರ್ಗದವರ ಸೇರಿದಂತೆ ಅನೇಕರು ಇದ್ದರು.