ಗೋಕಾಕ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ
ಗೋಕಾಕ ಮೇ 11: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಕಡೆಗಣಿಸುತ್ತಿದರಿಂದ ದೇಶದಲ್ಲಿ ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ಅವರು ಗುರುವಾರದಂದು ಗೋಕಾಕ ತಾಲೂಕಿನ ಕುಲಗೋಡ ಗ್ರಾಮದಲ್ಲಿ ನಡೆದ ಸ್ವಾಭಿಮಾನಿ ರೈತರ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಮತ್ತು ಬಿಜೆಪಿ ಸರಕಾರವಿದ್ದಾಗ ರೈತರ ಸಾಲಮನ್ನಾ ಮುಂದಾದಾಗ ಯಡಿಯೂರಪ್ಪ ನವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು ಆಗ ಬಜೇಟನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಕೇವಲ ಇಪ್ಪತೈದು ದಿನಗಳಲ್ಲಿ 25 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿ ರೈತರ ಅಕೌಂಟಿಗೆ ನೇರವಾಗಿ 25 ಸಾವಿರ ರೂಪಾಯಿಯನ್ನು ನೀಡಿದ್ದೆವೆ.ಕೇವಲ 39 ಸಾವಿರ ಕೋಟಿ ಬಜೆಟನಲ್ಲಿ ರೈತರ , ಬಡವರ ಕಣ್ಣೋರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.
ಈಗಿನ ಕಾಂಗ್ರೆಸ್ ಸರಕಾರಕ್ಕೆ ಪ್ರತಿ ವರ್ಷ 1,73,000 ಸಾವಿರ ಕೋಟಿ ಖರ್ಚು ಮಾಡುವ ಸಾರ್ಮಥ್ಯ ವಿದೆ.ರೈತರ ಸಾಲಮನ್ನಾ ಮಾಡಿ ಎಂದು ಕೇಳಿದರೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯ 50% ಪ್ಯತಿಷತ ಸಾಲಮನ್ನಾ ಮಾಡಲಿ ಆಮೇಲೆ ನಾವು ಸಹಕಾರಿ ಬ್ಯಾಂಕ್ ಗಳಲ್ಲಿಯ 50% ಪ್ರತಿಷತ ಸಾಲಾಮನ್ನಾ ಮಾಡುತ್ತೇವೆಂದು ರೈತರೊಂದಿಗೆ ಚಲ್ಲಾಟವಾಡುತ್ತಿದ್ದಾರೆ.
ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್ ಸರಕಾರ 13 ಸಾವಿರ ಕೋಟಿ ಸಾಲಮಾಡಿ ಸಾಲದ ಹೋರೆಯನ್ನು ರಾಜ್ಯದ ಆರು ಕೋಟಿ ಜನತೆಯ ಮೇಲೆ ಹೇರಿದ್ದಾರೆ. ರೈತರ ಸಾಲಮನ್ನಾ ಮಾಡಲು ಮಿನಾಮೇಷ ಮಾಡುತ್ತಿರುವ ಸರಕಾರ ಈ ಹೋತ್ತು ಯಾವ ದಾರಿಯಲ್ಲಿ ಸಾಗಿದೆ ಎಂಬುದನ್ನು ರೈತರು ಯೊಚನೆ ಮಾಡಬೇಕಾಗಿದೆ.
ಇವತ್ತು ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಸರಕಾರಿ ಹುದ್ದೆಗಳು ಖಾಲಿಯಿವೆ ಯುವಕರಿಗೆ ಉದ್ಯೋಗ ಕೊಡಲ್ಲಿಕೆ ಅವಕಾಶ ವಿದ್ದರೂ ಸಹ ವಂಚನೆಮಾಡಿ ಈ ಹುದ್ದೆಗಳನ್ನು ಖಾಲಿ ಉಳಿಸಿದ್ದಾರೆ.ಜೆಡಿಎಸ್ ಸರಕಾರ ವಿದ್ದಾಗ ಕೇವಲ 20 ತಿಂಗಳಲ್ಲಿ 55.ಸಾವಿರ ಶಿಕ್ಷಕರನ್ನು ನೇಮಿಸಿ 55 ಸಾವಿರ ಕುಂಟುಬಗಳಿಗೆ ಉದ್ಯೋಗ ನೀಡಿದ್ದೆವೆ.ಅಹಿಂದ ವರ್ಗದ ಪರವಾಗಿ ಇದ್ದವೆ ಎಂದು ಹೇಳಿಕೊಳ್ಳುವ ಸರಕಾರ ಮೊದಲು ಖಾಲಿ ಇರುವ ಸರಕಾರಿ ಹುದ್ದೆಗಳನ್ನು ತುಂಬುವ ಕಾರ್ಯ ಮಾಡಲಿ ಎಂದು ಕುಮಾರಸ್ವಾಮಿ ಸರಕಾರವನ್ನು ಆಗ್ರಹಿಸಿದರು.
ಫಲಸಭೀಮಾ ಯೋಜನೆಯಲ್ಲಿ ಮೋಸ::
ಕೇಂದ್ರ ಸರಕಾರ ಫಸಲಭೀಮಾ ಯೋಜನೆಯಲ್ಲಿ ರೈತರ ಹಗಲು ದರೋಡೆ ಮಾಡುತ್ತಿದೆ.ರೈತರು ಕಟ್ಟಿದ ಹಣವನ್ನು ಮರಳಿಕೊಡಲು ಕೇಂದ್ರ ಸರಕಾರಕ್ಕೆ ಆಗುತ್ತಿಲ್ಲಾ ಮುನ್ಸೂಚನೆ ಇಲ್ಲದೆ ನೋಟ್ ರದ್ದು ಮಾಡಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇಂದಿಗೂ ಎಟಿಎಂ ಮತೀ ಬ್ಯಾಂಕ್ ಗಳಲ್ಲಿ ಹಣಪಡೆಯಲು ರೈತರು ಪರದಾಡುತ್ತಿದ್ದಾರೆ.ಭಯೋತ್ಪಾದನೆ ತಡೆಯುತ್ತೆವೆಂದು ಹೇಳಿದ ಮೋದಿಯವರು ಭಯೋತ್ಪಾದನೆ ಮಟ್ಟಹಾಕಲು ಮುಂದಾಗಿಲ್ಲ ಗಡಿಯಲ್ಲಿ ದಿನಾಲು ನೂರಾರು ಯೋಧರು ತಮ್ಮ ಪ್ರಾಣ ಬಲಿಧಾನ ಮಾಡುತ್ತಿದ್ದಾರೆ ಇದನ್ನು ತಡೆಯಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಹೆಚಡಿಕೆ ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೋರಟ್ಟಿ, ಜೆಡಿಎಸ ಮುಖಂಡರಾದ ಹೆಚ.ಸಿ.ನೀರಾವರಿ, ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ , ಉತ್ತಮ ಪಾಟೀಲ್, ಪ್ರಕಾಶ ಸೋನವಾಲ್ಕರ,ಸತೀಶ ವಂಟಗುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಜೆಡಿಎಸ್ ನ ಚನ್ನಪ ವಗ್ಗನ್ನವರ ಸ್ವಾಗತಿಸಿದರು, ಗಂಗಾಧರ ಹೀರೆಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೇಸ ಮತ್ತು ಬಿಜೆಪಿ ಯ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಗೊಂಡರು .