RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಗೋಕಾಕದಲ್ಲಿ ಬೃಹತ್ ತಿರಂಗಾಯಾತ್ರೆ

ಗೋಕಾಕ:ಗೋಕಾಕದಲ್ಲಿ ಬೃಹತ್ ತಿರಂಗಾಯಾತ್ರೆ 

ಗೋಕಾಕದಲ್ಲಿ ಬೃಹತ್ ತಿರಂಗಾಯಾತ್ರೆ

ಗೋಕಾಕ ಮೇ 21 : ಕಾಂಗ್ರೇಸ್ ನಾಯಕರು ಪಾಕ್ ಏಜೇಂಟರಂತೆ ವರ್ತಿಸುತ್ತಿದ್ದು, ಭಾರತದ ಸೈನಿಕರು ಮಾಡುವ ಪ್ರತಿಯೊಂದು ದಾಳಿಗೂ ಸಾಕ್ಷಿಕೆಳುತ್ತಿದ್ದು ಇದಕ್ಕೆ ಪ್ರತಿಯೊಬ್ಬ ನಾಗರಿಕ ಉತ್ತರಕೊಡುವ ಕಾಲ ಆದಷ್ಟು ಬೇಗ ಬರಲಿದೆ ಎಂದು ಕಾಂಗ್ರೇಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಶಿ ಹೇಳಿದರು.
ಅವರು, ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತ(ಕೋರ್ಟ ಸರ್ಕಲ್)ವರೆಗೆ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಆಪರೇಷನ್ ಸಿಂದೂರ ಯಶಸ್ವಿ ಹಿನ್ನೆಯಲ್ಲಿ ಸೈನಿಕರ ಕುಟುಂಬಕ್ಕೆ ಆತ್ಮಬಲವನ್ನು ತುಂಬುವ ಉದ್ಧೇಶದಿಂದ ತಿರಂಗಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಫಹಲಗಾಂವ ದಾಳಿಯಲ್ಲಿ ನಮ್ಮ ದೇಶದ 26ನಾಗರಿಕರನ್ನು ಹತ್ಯೆ ಮಾಡಿದ ಉಗ್ರರ ಹಾಗೂ ಉಗ್ರರ ಪೋಷಣೆ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ತಕ್ಕ ಪಾಠಕಲಿಸಿದೆ. ಉಗ್ರರ ಅಡಗುತಾನಗಳು ಹಾಗೂ ಪಾಕಿಸ್ತಾನದ ಏರ್ ಬೇಸಗಳನ್ನು ದ್ವಂಸ ಮಾಡಿ ನಮ್ಮ ಹೆಣ್ಣುಮಕ್ಕಳ ತಂಟೆಗೆ ಬಂದರೆ ನಾವು ಸೆದೆಬಡೆಯದೆ ಬಿಡುವದಿಲ್ಲ ಎಂದು ಉತ್ತರ ನೀಡಿದೆ. ಇದನ್ನು ಸಂಭ್ರಮಿಸಬೇಕಾದ ಕಾಂಗ್ರೇಸ್ ಪಕ್ಷ ಸಾಕ್ಷೀ ಕೇಳುತ್ತಿರುವದು ಸೇನೆಗೆ ಮತ್ತು ದೇಶಕ್ಕೆ ಮಾಡುತ್ತಿರುವ ಬಹುದೊಡ್ಡ ದ್ರೋಹ ಎಂದರು.
ರಾಷ್ಟ್ರ ರಕ್ಷಣೆಯಲ್ಲಿ ಸೈನಿಕರಿಗೆ ಹಾಗೂ ಅವರ ಕುಟುಂಬಗಳಿಗೆ ನೈತಿಕ ಬಲವನ್ನು ಕಾರ್ಯವಾಗಬೇಕಿದೆ. ದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ನಮ್ಮ ನಿಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ತಿರಂಗಾ ಯಾತ್ರೆ ಗೌರವ ಸೂಚಕವಾಗಿದೆ. ಪ್ರತಿಯೊಬ್ಬರು ಸೈನಿಕರಿಗೆ ಹಾಗೂ ಸೈನಿಕರ ಕುಟುಂಬಕ್ಕೆ ಬೆಂಬಲವಾಗಿ ನಿಂತುಕೊಳ್ಳುವಂತೆ ಕರೆ ನೀಡಿದರು.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ತ್ರಿವರ್ಣ ಧ್ವಜದ ಮಾದರಿಯಲ್ಲಿ 200ಮೀ ಉದ್ದದ ತಯಾರಿಸಿದ ಧ್ವಜವು ತಿರಂಗಾ ಯಾತ್ರೆಯುದ್ದಕ್ಕೂ ಅತ್ಯಂತ ಮೆರಗು ತಂದಿತು. ಮೆರವಣಿಗೆಯೂದ್ದಕ್ಕೂ ಭಾರತದ ಪರ ಘೋಷಣೆ ಮೊಳಗಿತು.
ಈ ಸಂದರ್ಭದಲ್ಲಿ ಕಾರ್ಮಿಖ ಮುಖಂಡ ಅಂಬಿರಾವ ಪಾಟೀಲ, ಬಿಜೆಪಿ ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಆರ್‍ಎಸ್‍ಎಸ್‍ನ ಎಮ್ ಡಿ ಚುನಮರಿ, ಮುಖಂಡರುಗಳಾದ ಭೀಮಗೌಡ ಪೋಲಿಸಗೌಡರ, ಸುರೇಶ ಸನದಿ, ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಪ್ರಮೋದ ಜೋಶಿ, ಆನಂದ ಅತ್ತುಗೋಳ, ಮಂಜುನಾಥ ಪ್ರಭುನಟ್ಟಿ, ರಾಜೇಶ್ವರಿ ಒಡೆಯರ, ಸುರೇಶ ಪತ್ತಾರ, ಅಬ್ಬಾಸ ದೇಸಾಯಿ, ಪರಶುರಾಮ ಭಗತ, ಬಾಳೆಶ ತೋಟಗಿ, ಪಂಡಿತಪ್ಪ ಕಂಬಳಿ, ಕುಸುಮಾ ಖನಗಾಂವಿ, ಅಡಿವೆಪ್ಪ ನಾವಲಗಟ್ಟಿ, ಲಕ್ಕಪ್ಪ ತಹಶೀಲದಾರ, ಲಕ್ಷ್ಮಣ ತಳ್ಳಿ, ಶ್ರೀರಂಗ ನಾಯಕ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು.

Related posts: