RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ 

ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ

ಗೋಕಾಕ ಮಾ 8 : ಯುವ ಪೀಳಿಗೆಗೆ ಕಲೆಯ ಪರಿಚಯ ಮಾಡುತ್ತಿರುವ ಆಶಾಕಿರಣ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರದಂದು ನಗರದ ಜ್ಞಾನ ಮಂದಿರದಲ್ಲಿ ಆಶಾಕಿರಣ ಕಲಾಟ್ರಸ್ಟ್ ನವರು ಹಮ್ಮಿಕೊಂಡ ರಂಗ ಸ್ಮರಣೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರರಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಇಳಿವಯಸ್ಸಿನಲ್ಲಿ ಮಾಲತಿಶ್ರೀ ಅವರು ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಕಲಾವಿದರು ಗೋಕಾಕಕ್ಕೆ ಬರಲಿ ಎಂದು ಹಾರೈಸಿದ ಅವರು ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ, ಬೆಳೆಸುತ್ತಾರೆ. ರಂಗ ಕಲಾವಿದರನ್ನು ಗುರುತಿಸಿ ಅವರ ಪ್ರತಿಭಾ ಪದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು. ಕಲಾವಿದರು ತಮ್ಮ ಕಲಾ.ಪ್ರದರ್ಶನದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಾ ತಮ್ಮ ಜೀವನವನ್ನು ಮೂಡಿಪಾಗಿಟ್ಟಿರುತ್ತಾರೆ. ಅಂತಹ ಕಲಾವಿದರನ್ನು ಆಶಾ ಕಿರಣ ಕಲಾ ಟ್ರಸ್ಟ್ ನವರು ಪ್ರೋತ್ಸಾಹಿಸುತ್ತಿರುವುದು ಮಾದರಿಯಾಗಿದೆ. ಇಂತಹ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ ಕಲೆ ಹಾಗೂ ಕಲಾವಿದರರನ್ನು ಬೆಳೆಸಿ ನಮ್ಮ ಮುಂದಿನ ಪಿಳಿಗೆಗೆ ಕೋಡುಗೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಸಿ ಮಾತನಾಡಿದ ಕಲಾವಿದ ಎಸ್.ಎಮ್.ಖೇಡಗಿ
ಪ್ರೋತ್ಸಾಹವೇ ಕಲಾವಿದರಿಗೆ ಆಹಾರವಾಗಿದ್ದು, ಅದನ್ನು ನೀಡುವ ಮೂಲಕ ಜನರು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಇಂದಿನ ಯುವ ಪಿಳಿಗೆಗೆ ಸಂಸ್ಕಾರದ ಅರಿವು ಮೂಡಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಂಗಭೂಮಿ ಭೀಷ್ಮ ದಿವಂಗತ ಶ್ರೀ ಬಸವಣ್ಣೆಪ್ಪಾ ಹೊಸಮನಿ ರಂಗ ಪ್ರಶಸ್ತಿಯನ್ನು ಹಿರೇಬಿದರಿಯ
ಕಲಾವಿದ ಶ್ರೀ ಮಲ್ಲೇಶಪ್ಪ ಬೀರಾಳ ಹಾಗೂ ರಂಗಭೂಮಿ ದ್ರೋಣ ದಿವಂಗತ ಬಿ.ಆರ್ .ಅರಿಷಿಣಗೋಡಿ ರಂಗ ಪ್ರಶಸ್ತಿಯನ್ನು ವಿಜಯಪುರದ ಕಲಾವಿದ ಎಸ್.ಎಮ್.ಖೇಡಗಿ ಅವರಿಗೆ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅರಭಾವಿಯ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಬೈಲಹೊಂಗಲದ ಡಾ.ಮಹಾಂತೇಶ ಶಾಸ್ತ್ರಿಗಳು ವಹಿಸಿ ಆರ್ಶೀವಚನ ನೀಡಿದರು.

ವೇದಿಕೆಯಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ , ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾವಂಶಿ, ಸಿರಿಗನ್ನಡಂ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜರಗ್ಯಾಳ, ಕಿರುತರೆ ಕಲಾವಿದ ಶ್ರೀನಾಥ್ ವಶಿಷ್ಠ , ಪ್ರೋ.ಚಂದ್ರಶೇಖರ್ ಅಕ್ಕಿ, ರವಿಅರಿಷಿಣಗೋಡಿ, ಕಲಾಟ್ರಸ್ಟ್ ಅಧ್ಯಕ್ಷೆ ಮಾಲತಿಶ್ರೀ ಮೈಸೂರು, ಅಣ್ಣಪ್ಪ ಕಟಕರಿ ಇದ್ದರು .

Related posts: