RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ತಪಸಿ

ಗೋಕಾಕ:ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ತಪಸಿ 

ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ತಪಸಿ

ಗೋಕಾಕ ಸೆ 26 : ಜನಪರ ಆಡಳಿತದಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ರಾಷ್ಟ್ರೀಯ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು.
ಗುರುವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಶ್ರೀ ಅಮರನಾಥ ಜಾರಕಿಹೊಳಿ ಅಭಿಮಾನಿ ಬಳಗದವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜೀವ ಉಳಿಸುವ ರಕ್ತದಾನದಂತ ಪವೀತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯುವಕರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಆಚರಿಸುತ್ತಿರುವದು ಮಾದರಿಯಾಗಿದೆ. ರಕ್ತದಾನದಂತಹ ಶ್ರೇಷ್ಠ ದಾನ ಮತ್ತೊಂದಿಲ್ಲ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವ ಶಕ್ತಿ ಮೋದಿಯವರ ಆಶಯದಂತೆ ಬಲಿಷ್ಠ ಭಾರತ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಬೆಳಗಾವಿಯ ಬೀಮ್ಸ್ ಬ್ಲಡ್ ಬ್ಯಾಂಕನ ಡಾ. ಆರ್ ಜೆ ಪಾಟೀಲ ಮಾತನಾಡಿ, ರಕ್ತದಾನ ಮಾಡುವದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯಾಘಾತವನ್ನು ತಡೆಯುತ್ತದೆ. ನೆನಪಿನ ಶಕ್ತಿ ಹೆಚ್ಚಾಗುವುದು. 18 ರಿಂದ 60 ವರ್ಷದ ಒಳಗಿನವರು ಬಿಪಿ ಶುಗರ್ ಇದ್ದವರು ಸಹಿತ ರಕ್ತದಾನ ಮಾಡಬಹುದಾಗಿದ್ದು ಇಂತಹ ಪುಣ್ಯಕಾರ್ಯದಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ತಿಳಿಸಿದರು.
ಯುವನಾಯಕ ಅಮರನಾಥ ಜಾರಕಿಹೊಳಿ ಅವರು ರಕ್ತದಾನ ಮಾಡುವ ಮೂಲಕ ಈ ಶಿಭಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮಾಜಿ ಜಿಪಂ ಸದಸ್ಯರುಗಳಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯ ಅಬ್ಬಾಸ ದೇಸಾಯಿ, ಬಸವರಾಜ ಆರೆನ್ನವರ, ಜಯಾನಂದ ಹುಣಚ್ಯಾಳ, ಬಾಬು ಮುಳಗುಂದ, ಶಾಸಕರ ಆಪ್ತಸಹಾಯಕ ಸುರೇಶ ಸನದಿ, ತಾಲೂಕು ಆರೋಗ್ಯ ಅಧಿಕಾರಿ ಎಮ್ ಎಸ್ ಕೊಪ್ಪದ, ಮುಖ್ಯವೈದ್ಯಾಧಿಕಾರಿ ರವಿಂದ್ರ ಅಂಟಿನ, ಮುಖಂಡರುಗಳಾದ ಬಸವರಾಜ ಹಿರೇಮಠ, ಲಕ್ಷ್ಮಣ ಖಡಕಭಾಂವಿ, ಶಫಿ ಜಮಾದಾರ ಸೇರಿದಂತೆ ಶ್ರೀ ಅಮರನಾಥ ಜಾರಕಿಹೊಳಿ ಅಭಿಮಾನಿ ಬಳಗದವರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಇನ್ನರ್ ವ್ಹೀಲ್ ಹಾಗೂ ರೋಟರಿ ಸಂಸ್ಥೆಯವರು ಇದ್ದರು.

Related posts: