ಬೆಳಗಾವಿ:ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿ : ಇಮ್ರಾನ್ ತಫಕೀರ
ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿ : ಇಮ್ರಾನ್ ತಫಕೀರ
ಬೆಳಗಾವಿ ಸೆ 12 : ಸೆಪ್ಟೆಂಬರ್ 28,29 ರಂದು ಬೆಳಗಾವಿಯಲ್ಲಿ ಆಲ್ ಇಂಡಿಯಾ ಸತೀಶ ಅಣ್ಣಾ ಚೆಸ್ ಪಂದ್ಯಾವಳಿಗಳನ್ನು ನಗರದ ಮಹಾವೀರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸತೀಶ ಅಣ್ಣಾ ಪ್ಯಾನ ಕ್ಲಬ್ ನ ಅಧ್ಯಕ್ಷ ಇಮ್ರಾನ್ ತಫಕೀರ ಹೇಳಿದರು.
ನಗರದ ಸರ್ಕಿಟ್ ಹೌಸನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಪಂದ್ಯಾವಳಿಯಲ್ಲಿ ಆಲ್ ಇಂಡಿಯಾ ಮಟ್ಟದಲ್ಲಿ ಹಮ್ಮಿಕೊಂಡಿದ್ಧು, ದೇಶದ ವಿವಿಧ ಭಾಗಗಳಿಂದ ಚೆಸ್ ಆಟಗಾರರು ಭಾಗವಹಿಸಲ್ಲಿದ್ದಾರೆ. ಮೊದಲೇ ಬಹುಮಾನ 1 ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 50 ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ 25 ಸಾವಿರ ನಗದು ಹಾಗೂ ಟ್ರೋಫಿ ಸೇರಿದಂತೆ ಅನೇಕ ಆಕರ್ಷಕ ಬಹುಮಾನಗಳನ್ನು ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆದ್ದ ಆಟಗಾರರಿಗೆ ನೀಡಿ ಗೌರವಿಸಲಾಗುವುದು ಎಂದ ಅವರು ಈ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಯುವ ಮುಖಂಡ ರಾಹುಲ್ ಜಾರಕಿಹೊಳಿ , ಶಾಸಕ ಆಸೀಫ್ ಸೇಠ್, ಬಾಬಾಸಾಬೇಬ ಪಾಟೀಲ, ವಿಶ್ವಾಸ ವೈದ್ಯ, ಅಶೋಕ ಪಟ್ಟಣ , ಗಣೇಶ ಹುಕ್ಕೇರಿ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲ್ಲಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸು ಸ್ವರ್ಧಾಳುಗಳು ಸೆಪ್ಟೆಂಬರ್ 26ರ ಒಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ನಿಲೇಶ ಭಂಡಾರಿ ಮೊಬೈಲ್ ಸಂಖ್ಯೆ 895104537, ಸಂತೋಷ ನಿತುಕರ 8147350134, ಪ್ರಶಾಂತ್ ಅನವೆಕರ 9535308451, ಜಾಹೀದ್ ವಂಟಮೂರಿ 7795359141, ಶಾಅನ್ವರ ಕಿಲ್ಲೆದಾರ 7411678525, ವಿಜಯ ವೆರ್ನೇಕರ 8971588781 ಸಂಪರ್ಕಿಸಲು ಸತೀಶ ಅಣ್ಣಾ ಪ್ಯಾನ್ ಕ್ಲಬ್ ನ ಅಧ್ಯಕ್ಷ ಇಮ್ರಾನ್ ತಫಕೀರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಅಣ್ಣಾ ಪ್ಯಾನ್ ಕ್ಲಬ್ ಸಂಘಟನೆಯ ಬಸವರಾಜ ಬಾಗೇವಾಡಿ, ಅಜಯ ದಾಮನೇಕರ, ಆಕಾಶ ಮದಿಲಾಲ, ಪ್ರಶಾಂತ್ ಅನ್ವೇಕರ, ನಿಕೀತಾ ತರಲೆ, ಅಕ್ಫರ ಗಡೇಕರ,
, ವಿಕ್ಕಿ ಸಿಂಗ, ಶಾನವಾಜ ಕಿಲ್ಲೆದಾರ, ಜಾಹೀದ ವಂಟಮೂರಿ ,ದೀಕ್ಷಾ ಪೂಜೇರಿ, ಖಾದಿರ ಶೇಖ್, ಕಲೀಮ ಮುಲ್ಲಾ , ಉಪಸ್ಥಿತರಿದ್ದರು