RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಅವಿರೋಧ ಆಯ್ಕೆ

ಗೋಕಾಕ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಅವಿರೋಧ ಆಯ್ಕೆ 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಅವಿರೋಧ ಆಯ್ಕೆ

ಗೋಕಾಕ ಜು 15 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಉಪ್ಪಾರಟ್ಟಿ ಇದರ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆಗೆ 11 ಸ್ಥಾನಗಳಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆಯಾಗಿವೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಉಪ್ಪಾರಟ್ಟಿ ಇದರ ನೂತನ ಸದಸ್ಯರಾಗಿ ಭೀಮಪ್ಪ ಲಕ್ಷ್ಮಪ್ಪ ಆಡಿನ(ಸಾಮಾನ್ಯ ಸಾಲಗಾರರ ಕ್ಷೇತ್ರ), ರಾಮಪ್ಪ ಮುಶೇಪ್ಪ ಕಡಕೋಳ(ಸಾಮಾನ್ಯ ಸಾಲಗಾರರ ಕ್ಷೇತ್ರ), ದಶರಥ ಗೋವಿಂದಪ್ಪ ಕಿಚಡಿ(ಸಾಮಾನ್ಯ ಸಾಲಗಾರರ ಕ್ಷೇತ್ರ), ಯಮನಪ್ಪಾ ಲಕ್ಷ್ಮಪ್ಪ ನಂದಿ(ಸಾಮಾನ್ಯ ಸಾಲಗಾರರ ಕ್ಷೇತ್ರ), ಬಸವರಾಜ ತಿಪ್ಪಣ್ಣಾ ನೇಸರಗಿ(ಸಾಮಾನ್ಯ ಸಾಲಗಾರರ ಕ್ಷೇತ್ರ), ಶ್ರೀಮತಿ ಫಕೀರವ್ವಾ ಬಸಪ್ಪ ತಿಗಡಿ(ಮಹಿಳಾ ಸಾಲಗಾರರ ಕ್ಷೇತ್ರ), ಶ್ರೀಮತಿ ಸತ್ತೆವ್ವಾ ತವ್ಮ್ಮಣ್ಣಾ ಜಕಬಾಳ(ಮಹಿಳಾ ಸಾಲಗಾರರ ಕ್ಷೇತ್ರ), ಅಪ್ಪಯ್ಯಾ ಲಕ್ಷ್ಮಣ 4ಚೂನನ್ನವರ(ಬಿನ್ ಸಾಲಗಾರರ ಕ್ಷೇತ್ರ), ವಿಠ್ಠಲ ಯಮನಪ್ಪ ಚೂನನ್ನವರ(ಹಿಂದುಳಿದ ಅ ವರ್ಗ ಸಾಲಗಾರರ ಕ್ಷೇತ್ರ), ಶಿವಪ್ರಸಾಧ ಸದಾಶಿವಯ್ಯ ಮಠದ(ಹಿಂದುಳಿದ ಬ ವರ್ಗ ಸಾಲಗಾರರ ಕ್ಷೇತ್ರ), ಬಾಳಪ್ಪ ಶಟೇಪ್ಪ ಹರಿಜನ(ಪರಿಶಿಷ್ಟ ಜಾತಿ ಸಾಲಗಾರರ ಕ್ಷೇತ್ರ)ಕ್ಕೆ ಆಯ್ಕೆಯಾಗಿದ್ದಾರೆ.
ನೂತನ ಸದಸ್ಯರು ಹಾಗೂ ಉಪ್ಪಾರಹಟ್ಟಿ ಗ್ರಾಮಸ್ಥರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಅಭಿನಂಧಿಸಿದ್ದಾರೆ.

Related posts: