ಗೋಕಾಕ:ವಿದ್ಯಾರ್ಥಿಗಳು ವ್ಶೆಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಸಂಶೋಧಕರಾಗಿ ದೇಶದ ಕೀರ್ತಿಯನ್ನು ಹೆಚ್ಚಿಸಿ : ಪಟ್ಟದಕಲ್

ವಿದ್ಯಾರ್ಥಿಗಳು ವ್ಶೆಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಸಂಶೋಧಕರಾಗಿ ದೇಶದ ಕೀರ್ತಿಯನ್ನು ಹೆಚ್ಚಿಸಿ : ಪಟ್ಟದಕಲ್
ಗೋಕಾಕ ಮಾ 6 : ವಿದ್ಯಾರ್ಥಿಗಳು ವ್ಶೆಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಸಂಶೋಧಕರಾಗಿ ದೇಶದ ಕೀರ್ತಿಯನ್ನು ಹೆಚ್ಚಿಸುವಂತೆ ಎಸ್ಎಲ್ಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್ ಎಮ್ ಪಟ್ಟದಕಲ್ ಹೇಳಿದರು.
ಸೋಮವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಾಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿಜ್ಞಾನ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನವಿಲ್ಲದೇ ಮಾನವನ ಬದುಕು ಅಸಾಧ್ಯ. ವಿಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಡಾ.ಸಿ ವಿ ರಾಮನ್ ಅವರ ರಾಮನ್ ಎಪೇಕ್ಟ್ ನೋಬೇಲ್ ಪ್ರಶಸ್ತಿ ದೊರೆತು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿದೆ. ಅದರ ಸ್ಮರಣೆಗಾಗಿ ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅವರ ಪ್ರೇರಣೆಯಿಂದ ತಾವು ವಿಜ್ಞಾನಿಗಳಾಗುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ಪ್ರಾಚಾರ್ಯ ಹಾಗೂ ಸಿಂಡಿಕೇಟ್ ಸದಸ್ಯ ಐ ಎಸ್ ಪವಾರ, ಉಪನ್ಯಾಸಕಿ ಸುನೀತಾ ಈಳಿಗೇರ, ವಿದ್ಯಾರ್ಥಿ ಪ್ರತಿನಿಧಿಗಳಾದ ಐಶ್ವರ್ಯ ಅಲ್ಲನ್ನವರ, ದೀಪಕ ಪೂಜೇರಿ ಇದ್ದರು.
ರಶ್ಮಿ ತುಪ್ಪದ ಸ್ವಾಗತಿಸಿದರು. ರುತಿಕಾ ತೇರದಾಳ ನಿರೂಪಿಸಿದರು. ವಿನಾಯಕ ಹುಕ್ಕೇರಿ ವಂದಿಸಿದರು.