RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಿ : ಗುರುಪಾದ ಕಳ್ಳಿ,,ಯಲ್ಲೇಶ ಕೊಲ್ಕಾರ

ಗೋಕಾಕ:ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಿ : ಗುರುಪಾದ ಕಳ್ಳಿ,,ಯಲ್ಲೇಶ ಕೊಲ್ಕಾರ 

ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಿ : ಗುರುಪಾದ ಕಳ್ಳಿ,,ಯಲ್ಲೇಶ ಕೊಲ್ಕಾರ 

ಗೋಕಾಕ ಜ 19 : ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದಲ್ಲಿ ಇಂದು ಶಕ್ತಿಕೇಂದ್ರದ ಪ್ರಮುಖರ ಹಾಗೂ ಶಕ್ತಿಕೇಂದ್ರದ ಅಲ್ಪಾವಧಿ ವಿಸ್ತಾರಕರ ಸಭೆ ಗುರವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಜರುಗಿತು.
    ವಿಜಯ ಸಂಕಲ್ಪ ಯಾತ್ರೆಯ ಸಭೆಯನ್ನು ಸಂಚಾಲಕರಾದ ಗುರುಪಾದ ಕಳ್ಳಿ, ಸಹ ಸಂಚಾಲಕರಾದ ಯಲ್ಲೇಶ ಕೊಲ್ಕಾರ ಪ್ರಸ್ತಾವಿಕವಾಗಿ ಮಾತನಾಡಿ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸು
ವಂತೆ ತಿಳಿಸಿದರು.
     ಈ ಸಂದರ್ಭದಲ್ಲಿ ಗೋಕಾಕ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಚ್ಯಾಳಿ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
    2023 ಜನೆವರಿ 21ರಿಂದ 29ರವರೆಗೆ ನಡೆಯುವ ವಿಜಯ ಸಂಕಲ್ಪ ಯಾತ್ರೆಯನ್ನು 21 ರಂದು ವಿಜಯಪುರಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಚಾಲನೆ ನೀಡಲಿದ್ದಾರ ಆದಕಾರಣ ಪ್ರತಿ ಬೂತ್‍ನಲ್ಲಿ ಏಕ ಕಾಲಕ್ಕೆ ಕರಪತ್ರ ಹಂಚುವುದು, ಮನೆ ಮನೆಗೆ ಸ್ಟೀಕರ್ ಹಚ್ಟುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.

Related posts: