ಗೋಕಾಕ:ಕೊರೋನಾ ಹಿನ್ನೆಲೆ: ಗೋಕಾಕ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯಗಳ ಕೀಟಗಳ ವಿತರಣೆ
ಕೊರೋನಾ ಹಿನ್ನೆಲೆ: ಗೋಕಾಕ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯಗಳ ಕೀಟಗಳ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :
ಕರೋನಾ ಮಹಾಮಾರಿಯಿಂದ ತತ್ತರಿಸಿದ ಜನತೆಗೆ ತಮ್ಮ ಸ್ವಂತ ಹಣದಲ್ಲಿ ಗೋಕಾಕ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯಗಳ ಕೀಟಗಳನ್ನು ನೀಡಲು ಜಲಸಂಪನ್ಮೂಲ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ.
ಶನಿವಾರದಿಂದ ಕ್ಷೇತ್ರದಾಧ್ಯಂತ ಸರಬರಾಜು ಮಾಡಲು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಗೋಕಾಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳಿಗೆ ಆಹಾರ ಧಾನ್ಯಗಳನ್ನು ನೀಡುತ್ತಿದ್ದು, ಇದರಲ್ಲಿ ಬಡವ, ಬಲ್ಲಿದನೆಂಬ ಬೇಧಭಾವ ಮಾಡದೇ ಪ್ರತಿ ಕುಟುಂಬಗಳಿಗೂ ಸುಮಾರು 15 ಪದಾರ್ಥಗಳೂಳ್ಳ ಅಡುಗೆಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಜನಸಾಮಾನ್ಯರಿಗೆ ವಿತರಿಸುತ್ತಿದ್ದಾರೆ.
ಲಾಕ್ ಡೌನ್ ಹಿನ್ನಲೆ ಕಳೆದ ಎರಡು ತಿಂಗಳುಗಳಿಂದ ಕೆಲಸವಿಲ್ಲದೇ ಪರದಾಡುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಕೂಲಿಕಾರ ಬಗ್ಗೆ ಶಾಸಕರಿಗಿರುವ ಜನಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಕಳೆದ ಒಂದು ವಾರದಿಂದ ಕೀಟ್ಟಗಳ ತಯಾರಿಕೆ ನಡೆದಿದೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಕೀಟ್ಟಗಳನ್ನು ತಯಾರಿಸಲಾಗಿದೆ. ಎರಡ್ಮೂರು ದಿನಗಳ ವರೆಗೆ ಕ್ಷೇತ್ರ ಎಲ್ಲ ಕುಟುಂಬಗಳಿಗೆ ಈ ಆಹಾರ ಧಾನ್ಯಗಳ ಕೀಟ್ಟಗಳು ಪೂರೈಕೆಯಾಗಲಿವೆ.
ಕೀಟ್ ವಿತರಣೆಗೆ ಚಾಲನೆ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಶನಿವಾರ ದಿ.22 ರಂದು ಬೆಳಿಗ್ಗೆ 8ಗಂಟೆಗೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕ್ಷೇತ್ರದಾಧ್ಯಂತ ಆಹಾರ ಧಾನ್ಯಗಳ ಕೀಟ್ಟಗಳನ್ನು ಸರಬರಾಜು ಮಾಡಲಾಗುವದು. ಕಾರ್ಯಕರ್ತರು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕ್ಷೇತ್ರದ ಪ್ರತಿ ಮನೆ ಮನೆಗಳಿಗೆ ಆಹಾರ ಧಾನ್ಯಗಳ ಕೀಟ್ಟಗಳನ್ನು ವಿತರಿಸುವದಾಗಿ ಸಚಿವರ ಆಪ್ತಕಾರ್ಯದರ್ಶಿ ಭೀಮಗೌಡ ಪೋಲಿಸಗೌಡರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.