ಗೋಕಾಕ:ಪಟೇಲ್ ಸಂಪುಟದಲ್ಲಿ ಸಚಿವ ಇದ್ದ ಸಚಿವ ಕತ್ತಿ ಹೇಳಿಕೆ ಅಸಮಂಜಸ : ಗೋಕಾಕ ಜಿಲ್ಲೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ಮುರುಘರಾಜೇಂದ್ರ ಶ್ರೀ ಮಾಹಿತಿ
ಪಟೇಲ್ ಸಂಪುಟದಲ್ಲಿ ಸಚಿವ ಇದ್ದ ಸಚಿವ ಕತ್ತಿ ಹೇಳಿಕೆ ಅಸಮಂಜಸ : ಗೋಕಾಕ ಜಿಲ್ಲೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ಮುರುಘರಾಜೇಂದ್ರ ಶ್ರೀ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 6 :
ಮಾಜಿ ಮುಖ್ಯಮಂತ್ರಿ ದಿವಂಗತ ಜಿ.ಎಚ್.ಪಟೇಲ್ ಸಂಪುಟದಲ್ಲಿ ಅಂದು ಸಚಿವವರಾಗಿದ್ದ ಉಮೇಶ್ ಕತ್ತಿ ಅವರಿಗೆ ಗೋಕಾಕ ಜಿಲ್ಲಾ ಹೋರಾಟ ವಿಷಯ ಗೋತ್ತಿದ್ದರು ಸಹ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ವಿಭಾಗೀಯವಾಗಿ ಹೊಸ ಜಿಲ್ಲೆಗಳನ್ನು ಮಾಡಬೇಕೆಂದು ಹೆಳಿಕೆ ನೀಡಿರುವದು ಅಸಮಂಜಸವಾಗಿದೆ ಎಂದು ಗೋಕಾಕ ಜಿಲ್ಲಾ ಚಾಲನಾ ಸಮಿತಿ ಅಧ್ಯಕ್ಷರೂ ಆದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು ಕಳೆಜ 4 ದಶಕಗಳಿಂದ ನಡೆದುಬಂದ ಹೋರಾಟಗಳನ್ನು ಪರಿಗಣಿಸದೆ ರಾಜಕೀಯ ಕುಮ್ಮಕಿನಿಂದ ಜವಾಬ್ದಾರಿಯುತ್ತ ಸ್ಥಾನದಲ್ಲಿದ್ದವರು ಕತ್ತಿ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸರಕಾರ ಚಿಕ್ಕೋಡಿ, ಬೈಲಹೊಂಗಲ ಸೇರಿದಂತೆ ಯಾವುದೇ ತಾಲೂಕನ್ನು ಜಿಲ್ಲೆ ಮಾಡಲಿ ನಮ್ಮ ತಕರಾರು ಇಲ್ಲಾ ಆದರೆ ಗೋಕಾಕ ಮಾತ್ರ ಹೊಸ ಜಿಲ್ಲೆಯಾನ್ನಾಗಿ ಮಾಡಲೇ ಬೇಕು.
ಪಿ.ಸಿ ಗದ್ದಿಗೌಡರ, ಹುಂಡೇಕರ ಮತ್ತು ವಾಸುದೇವ ಮೂರು ಆಯೋಗಗಳು ಗೋಕಾಕ ಜಿಲ್ಲೆ ಆಗಬೇಕು ಎಂದು ಶಿಫಾರಸು ಮಾಡಿವೆ ಅದನ್ನು ಆಧರಿಸಿ ಮೊದಲು ಗೋಕಾಕ ಜಿಲ್ಲೆಯಾಗಿ ಮಾಡಬೇಕು ಸರಕಾರ ನಮ್ಮ ಈ ಮನವಿಗೆ ಸ್ವಂದಿಸದ್ದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವದು ಎಂದು ಚಾಲನಾ ಸಮಿತಿ ಅಧ್ಯಕ್ಷ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ವಕೀಲ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಮಾತನಾಡಿ ಸಚಿವ ಕತ್ತಿ ಹೇಳಿಕೆ ಅಸಮಂಜಸವಾಗಿದ್ದುರ ನೂತನ ಜಿಲ್ಲೆಗಳನ್ನು ವಿಭಾಗೀಯವಾಗಿ ವಿಗಂಡಿಸಬೇಕು ಎಂದು ಹೇಳಿದ್ದಾರೆ ಬಹುಶಃ ಸಚಿವ ಕತ್ತಿ ಅವರಲ್ಲಿ ಜ್ಞಾನದ ಕೋರತೆ ಎದ್ದು ಕಾಣುತ್ತಿದೆ. ಗೋಕಾಕ ನೂತನ ಜಿಲ್ಲೆಯಾಗದಿದ್ದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಗೋಕಾಕ ಜಿಲ್ಲೆಗಾಗಿ ನಾಳೇ ಹೋರಾಟ : ಗೋಕಾಕ ನೂತನ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ದಿನಾಂಕ 7 ರಂದು ಮುಂಜಾನೆ 11 ಘಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿ ತಹಶೀಲ್ದಾರ ಕಛೇರಿವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಗುವದು. ಕಾರಣ ತಾಲೂಕಿನ ಎಲ್ಲಾ ಜನತೆ ಹೋರಾಟದಲ್ಲಿ ಭಾಗವಹಿಸಿ ಗೋಕಾಕ ಜಿಲ್ಲಾ ಹೋರಾಟಕ್ಕೆ ಬೆಂಬಲಿಸಬೇಕೆಂದು ಶ್ರೀಗಳು ಮನಿವಿ ಮಾಡಿದ್ದಾರೆ
ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ನ್ಯಾಯವಾದಿಗಳಾದ ಶಶಿಧರ ದೇಮಶೆಟ್ಟಿ, ಸಿ.ಬಿ.ಗಿಡ್ಡನವರ, ಶಂಕರ ಗೋರೋಶಿ , ಎಲ್.ಎಂ ಬುದಿಗೋಪ್ಪ, ವಾಯ್.ಕೆ ಕೌಜಲಗಿ, ಜಿ.ಎಸ್.ನಂದಿ, ಯು.ಬಿ.ಶಿಂಪಿ, ರಾಜು ಕೊಟಗಿ, ಸುಭಾಷ್ ಪಾಟೀಲ್, ಎ.ಎ ಪಾಟೀಲ, ಎಚ್.ಎ ಕಲ್ಲೋಳಿ, ಸಂಘಟನೆಗಳ ಮುಖಂಡರುಗಳಾದ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಪವನ ಮಹಾಲಿಂಗಪೂರ, ಮಲ್ಲಿಕಜಾನ ತಲವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.