RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ : ಬಿಇಒ ಜಿ.ಬಿ.ಬಳಗಾರ

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ : ಬಿಇಒ ಜಿ.ಬಿ.ಬಳಗಾರ 

ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ  ನಡೆಸುವ  ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ  : ಬಿಇಒ ಜಿ.ಬಿ.ಬಳಗಾರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 :

ಪ್ರಸಕ್ತ ಸಾಲಿನ 2022  ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಾಗಿ ವಲಯದಲ್ಲಿ ಒಟ್ಟು 21 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಗೋಕಾಕ  ವಲಯದ ಒಟ್ಟು 4518 ವಿದ್ಯಾರ್ಥಿಗಳು  ಪರೀಕ್ಷೆ ಎದುರಿಸುತ್ತಿದ್ದು, ಪರೀಕ್ಷೆಗಳು ಸುಗಮ ರೀತಿಯಲ್ಲಿ  ನಡೆಸುವ  ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಒ ಜಿ.ಬಿ.ಬಳಗಾರ ತಿಳಿಸಿದ್ದಾರೆ .

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಲಾಖೆಯ ಮಾರ್ಗದರ್ಶನದಂತೆ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು,  ಗಂಡು-2332, ಹೆಣ್ಣು 2186,  ಪುನರಾವರ್ತಿತ-18  ವಿದ್ರ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಸ್ಟರ್  ಸಹಿತ 14, ಹಾಗೂ   7 ಕಸ್ಟರ್  ರಹಿತ ಕೇಂದ್ರಗಳನ್ನು ತೆರಯಲಾಗಿದೆ. 

ಪರೀಕ್ಷೆಗೆ ಸಿಬ್ಬಂದಿ ನೇಮಕ : ಮುಖ್ಯ ಅಧೀಕ್ಷರು, ಪ್ರಶ್ನೆ ಪತ್ರಿಕೆ ಪಾಲಕರು, ಕೋಠಡಿ ಮೇಲ್ವಿಚಾರಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸ್ಥಾನಿಕ ಜಾಗೃತ ದಳ, ವಿಶೇಷ ಜಾಗೃತ ದಳ , ಮೊಬೈಲ ಸ್ವಾಧೀನ ಅಧಿಕಾರಿಗಳು ಸೇರಿದಂತೆ 500 ಸಿಬ್ಬಂದಿಗಳು ಪರೀಕ್ಷಾ ಕೆಲಸವನ್ನು ನಿರ್ವಹಿಸಲಿದ್ದಾರೆ.
ಮೂಲಭೂತ ಸೌಲಭ್ಯ : ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಬ್ಲಾಕ್ ಗಳನ್ನು ತಯಾರಿ ಮಾಡಲಾಗಿದೆ. ಪ್ರತಿ ಬ್ಲಾಕ್ ನಲ್ಲಿ 20 ವಿದ್ಯಾರ್ಥಿಗಳು ಇರಲಿದ್ದಾರೆ, ಇವರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಾರದಂತೆ ಅಣುಕು ಪರೀಕ್ಷೆಯನ್ನು ಮಾಡಿ ಅವರ ಕೊಠಡಿ ಮತ್ತು ಡೇಸ್ಕಗಳ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಪರೀಕ್ಷಾ ಕೇಂದ್ರ ಸುತ್ತಮುತ್ತಲೂ 144 ಕಲ್ಲಂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಎಲ್ಲಾ ಜರಾಕ್ಸ ಅಂಗಡಿಗಳು ಬಂದ ಮಾಡಲು ತಾಲೂಕಾಡಳಿತ ಕ್ರಮ ಕೈಗೋಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಥವಾ ನಿರ್ಭಂಧಿತ ಸ್ಥಳದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿದರೆ ಕರ್ನಾಟಕ ಶಿಕ್ಷಣ ಕಾಯ್ದೆ ಖಂಡಿಕೆ 115ರ ಧಂಡ ಸಂಹಿತೆ ಪರೀಕ್ಷೆ ನಿಯಮ ಉಲ್ಲಂಘನೆ ಸಕ್ಸಸ್ 24 (A) ಪ್ರಕಾರ ತಪ್ಪಿಸ್ಥರಿಗೆ 3 ರಿಂದ 4 ವರ್ಷದವರೆಗೆ ಜೈಲು ವಾಸ ಹಾಗೂ 5 ಲಕ್ಷದವರೆಗೆ ದಂಡಕ್ಕೆ ಗುರಿಯಾಗುವರು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಧೈರ್ಯ ಮುಕ್ತ ಪರೀಕ್ಷೆ ಬರೆಯಲು ಅವರಿಗೆ ಸ್ವಾಗತಿಸಲು ಗೂಲಾಬಿ ಹೂ, ತಳಿಲು   ತೋರಣ  ,ರಂಗೋಲಿ ಹಾಕಿ ಸ್ವಾಗತಿಸಲಾಗುವದು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು , ಪರೀಕ್ಷೆ ಮುಗಿದ ನಂತರ ಪ್ರತಿ ದಿನ ಉಪ ನಿರ್ದೇಶಕರ ನೇತೃತ್ವದ ತಂಡ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ಅವ್ಯವಹಾರ ಕಂಡುಬಂದಲ್ಲಿ ತಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಇಲಾಖೆಯ ನಿರ್ದೇಶನ ಮೇರೆಗೆ ಪರೀಕ್ಷೆ ಬರೆಯುವ ಎಲ್ಲಾ ಅಭ್ಯರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಎಸ್.ಎಸ್.ಎಲ್.ಸಿ  ಮಕ್ಕಳನ್ನು ಪರೀಕ್ಷೆಗೆ ಅಣಿಗೋಳಿಸಲು ಸೆಪ್ಟೆಂಬರ್ ತಿಂಗಳನಿಂದ ವಲಯದಲ್ಲಿ  ವಿಶೇಷ ಕಾರ್ಯಗಳಾದ ಗುರುಜಿ ಬಂದರು ಗುರುವಾರ , ವಿಜ್ಞಾನದಲ್ಲಿ ರಂಗೋಲಿ, ದಿನಕ್ಕೊಂದು ವಿಜ್ಞಾನ ಚಿತ್ರ , ನಕ್ಷಾ ಸಪ್ತಾಹ, ಪತ್ರದಿಂದ ಹತ್ತರ , ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಪ್ರೇರಣಾ ಕಾರ್ಯಾಗಾರ, ಓದುವ ಮನೆ, ಹಸಿರುಮನೆ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತಯಾರಿ ಮಾಡಿಸಲಾಗಿದ್ದು , ವಿದ್ಯಾರ್ಥಿಗಳು ಭಯ ಪಡದೆ ಪರೀಕ್ಷೆ ಎದುರಿಸಿಬೇಕೆಂದು  ಬಿಇಒ  ಬಳಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ   ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪತ್ರ ಬರೆಯುವ ಮೂಲಕ ಧೈರ್ಯ ತುಂಬಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಪರೀಕ್ಷೆ ಸುಸೂತ್ರವಾಗಿ ನಡೆದು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಸಾಧಿ‌ಸಲೆಂದು  ಶುಭ ಹಾರೈಸಿದ್ದಾರೆ. 

ಸಹಾಯವಾಣಿ: ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೊ.9480695043-9902715414, ನೂಡಲ್ ಅಧಿಕಾರಿ ಬಿ.ಎಮ್.ವಣ್ಣೂರ 9448191916, ಬಿ.ಆರ್.ಸಿ  ಸಮನ್ವಯ ಅಧಿಕಾರಿ 9480695057 ಸಂಪರ್ಕಿಸಬಹುದು.

Related posts: