ಗೋಕಾಕ:ಕೆನರಾ ಬ್ಯಾಂಕ್ ಬೃಹತ್ ರಿಟೇಲ್ ಉತ್ಸವ: ಗ್ರಾಹಕರಿಂದ ವಿವಿಧ ಸಾಲ ಸವಲತ್ತುಗಳಿಗಾಗಿ ಹೆಸರು ನೋಂದಣಿ
ಕೆನರಾ ಬ್ಯಾಂಕ್ ಬೃಹತ್ ರಿಟೇಲ್ ಉತ್ಸವ: ಗ್ರಾಹಕರಿಂದ ವಿವಿಧ ಸಾಲ ಸವಲತ್ತುಗಳಿಗಾಗಿ ಹೆಸರು ನೋಂದಣಿ
ನಮ್ಮ ಬೆಳೆಗಾವಿ ಇ – ವಾರ್ತೆ, ಗೋಕಾಕ ಫೆ 25 :
ನಾಗರೀಕರು ತಮ್ಮ ಬ್ಯಾಂಕಿಂಗ್ ಅವಶ್ಯಕತೆಗಳಿಗಾಗಿ ಇನ್ನು ಬ್ಯಾಂಕಿಗೆ ಅಲೆದಾಡುವ ಪ್ರಮೇಯವೇ ಇಲ್ಲ, ಕೆನರಾ ಬ್ಯಾಂಕ ತಮ್ಮ ಮನೆ ಬಾಗಿಲಿಗೆ ಬಂದು ಸೇವೆಗಳನ್ನು ನೀಡಲು ಉತ್ಸುಕವಾಗಿದೆ, ಗ್ರಾಹPರು ನಮ್ಮ ಸೇವೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಪಿ.ಎಚ್.ವಿ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಇತ್ತೀಚೆಗೆ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆ ಮೈದಾನದಲ್ಲಿ ಕೆನರಾ ಬ್ಯಾಂಕ್ ಪರ ಹಮ್ಮಿಕೊಂಡಿದ್ದ ಬೃಹತ ರಿಟೇಲ್ ಉತ್ಸವದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಗ್ರಾಹಕ ಸ್ನೇಹಿ ಸಾಲ ಯೋಜನೆಗಳನ್ನು ಶೀಘ್ರವಾಗಿ ತಲುಪಿಸುವ ಸೇವೆಯನ್ನು ಕೆನರಾ ಬ್ಯಾಂಕ್ ಮಾಡುತ್ತಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೆನರಾ ಬ್ಯಾಂಕಿನೊಂದಿಗೆ ತಮ್ಮ ಮೂವತ್ತು ವರ್ಷಗಳ ಸಂಬಂಧವನ್ನು ಮೆಲುಕು ಹಾಕುತ್ತ ಬ್ಯಾಂಕ ಗ್ರಾಹ ಸ್ನೇಹಿ ಒದಗಿಸುವ ಸೇವೆಗಳನ್ನು ಕೊಂಡಾಡಿದರು.
ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ರಿಟೇಲ್ ಉತ್ಸವಕ್ಕೆ ಭೇಟಿ ನೀಡಿ ಬ್ಯಾಂಕಿನ ವಿನೂತನ ಯೋಜನೆಯ ವೈಶಿಷ್ಠ್ಯತೆಗಳು ನಾಗರಿಕರಿಗೆ ಪ್ರಯೋಜನಕಾರಿ ಆಗಿವೆ ಎಂದರು.
ರೀಟೇಲ್ ಉತ್ಸವದಲ್ಲಿ ಕಾರ್ ಡೀಲರಗಳಾದ ಟಾಟಾ ಮೋಟರ್ಸ್, ನಿಶಾನ್ ಕಾರ್ಸ್, ನಾಗಶಾಂತಿ ಹುಂಡೈ, ಶಾಂತೇಶಾ ಮೋಟರ್ಸ್ ಮತ್ತು ಕೀಯಾ ಮೋಟರ್ಸ್ ತಮ್ಮ ವಿವಿಧ ಮಾದರಿಯ ವಾಹನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಅಲ್ಲದೆ ನಗರದ ವಿವಿಧ ಕಟ್ಟಡ ವಿನ್ಯಾಸಕಾರರು, ಇಂಜಿನೀಯರರು ಭಾಗವಹಿಸಿ ಜನರಿಗೆ ಮಾರ್ಗದರ್ಶನ ನೀಡಿದರು. ಗೋಕಾಕ ನಗರದ ಮತ್ತು ಸುತ್ತಮುತ್ತಲಿನ ನಾಗರೀಕರು ಉತ್ಸವದಲ್ಲಿ ಆಸಕ್ತಿಯಿಂದ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದುಕೊಂಡರು.
ಬ್ಯಾಂಕಿನ ರಿಟೇಲ ಅಸೆಟ್ಸ ಮುಖ್ಯಸ್ಥ ಮಂಡಳ ಪ್ರಬಂಧಕ ಬಲವಂತ ಕುಲಕರ್ಣಿ ಅವರು ಪ್ರಾಸ್ತಾವಿಕ ಮಾತನಾಡಿ, ಗೃಹ ಸಾಲ, ಶಿಕ್ಷಣ ಸಾಲ ಮತ್ತು ವಾಹನ ಸಾಲ ಯೋಜನೆಯ ಸಂಪೂರ್ಣ ಚಿತ್ರಣವನ್ನು ನೀಡಿ ರಿಟೇಲ್ ಉತ್ಸವದ ದಿನದಂದು ಒಟ್ಟು 75 ಗ್ರಾಹಕರು ತಮ್ಮ ವಿವಿಧ ಸಾಲದ ಅವಶ್ಯಕತೆಗಳನ್ನು ನೊಂದಾಯಿಸಿದ್ದಾರೆ ಎಂದು ಮಾಹಿಗಿ ನೀಡಿದರು.
ಕ್ಷೇತ್ರೀಯ ಕಾರ್ಯಾಲಯದ ಮಂಡಳ ಪ್ರಬಂಧಕ ಚಿಂದಮ್ ರಮೇಶ, ಮಾರುತಿ ಶ್ರೀನಿವಾಸ, ಗೋಕಾಕ ಶಾಖೆಗಳ ಪ್ರಬಂಧಕರುಗಳು ಮತ್ತು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರಿಗೆ ಬ್ಯಾಂಕಿನ ವಿವಿಧ ಯೋಜನೆಗಳ ಮಾಹಿತಿ ಒದಗಿಸಿದರು.