ಘಟಪ್ರಭಾ:ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಿ ಕೊಳ್ಳಿ : ಸುರೇಶ ಸನದಿ
ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಿ ಕೊಳ್ಳಿ : ಸುರೇಶ ಸನದಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 20 :
ಸ್ಥಳೀಯ ಘಟಪ್ರಭಾ ಪುರಸಭೆಯ ಹೋಲ್ ಸೇಲ್ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ವತಿಯಿಂದ ಗುರುವಾರದಂದು ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮ.ನಿ.ಪ್ರ.ಸ್ವ.ಡಾ.ಮಲ್ಲಿಕಾರ್ಜನ ಮಹಾಸ್ವಾಮಿಗಳು ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿಮಠ ಹಾಗೂ ಶ್ರೀ ಕುಮಾರೇಶ್ವರ ಹೊಸಮಠ ಶ್ರೀ ವಿರೂಪಾಕ್ಷ ದೇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕ ಸುರೇಶ ಸನದಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವ್ಯಾಪಾರಸ್ಥರು ತಮ್ಮ ಒಗ್ಗಟ್ಟಿನ ಪ್ರದರ್ಶನದ ಪ್ರತೀಕ ಈ ದಿನಾಚರಣೆ ಎಲ್ಲರಲ್ಲಿ ಹುಮ್ಮಸ್ಸು ತರಲಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದು ಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ರಾಮಣ್ಣ ಹುಕ್ಕೇರಿ. ಡಿ ಎಮ್ ದಳವಾಯಿ. ಸುರೇಶ್ ಪಾಟೀಲ, ರಾಜು ಕತ್ತಿ, ಜಿ.ಎಸ್, ರಜಪೂತ, ಸುಧೀರ ಜೋಡಟ್ಟಿ, ಈಶ್ವರ ಮಟಗಾರ, ಮಲ್ಲು ಕೋಳಿ, ಸುರೇಶ್ ಪೂಜಾರಿ, ನಾಗರಾಜ ಜಂಬ್ರಿ, ಈರಣ್ಣ ಕಲಘಟಗಿ, ಶೇಖರ್ ಕುಲಗೂಡ, ಸಲೀಮ ಕಬ್ಬೂರ, ಇಮ್ರಾನ್ ಬಟಕುರ್ಕಿ, ಪ್ರವೀಣ್ ಮಟಗಾರ, ಕೆಂಪಣ್ಣ ಚೌಕಶಿ, ಕಾಡಪ್ಪ ಕರೋಶಿ, ಅರ್ಜುನ ಗಂಡವ್ವಗೋಳ, ಅಪಾಸಾಬ ಮುಲ್ಲಾ, ಹಾಗೂ ಬೀದಿ ವ್ಯಾಪಾರಸ್ಥರು ಸಂಘಟನೆಯ ಕಾರ್ಯಕರ್ತರು, ರೈತರು, ಘಟಪ್ರಭಾ ನಗರದ ಜನರು ಇದ್ದರು. ಈ ಸಂದರ್ಭದಲ್ಲಿ ಬೀದಿ ಬಿದಿ ವ್ಯಾಪಾರಸ್ಥರ ಮಾಡುತ್ತಿರುವ ಹಿರಿಯರಿಗೆ ಸನ್ಮಾನ ಮಾಡಲಾಯಿತು,