RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಆಸ್ತಿಗಾಗಿ ಕೊಲೆಯಲ್ಲಿ ಅಂತ್ಯಗೊಂಡ ಸಹೋದರರ ಕಲಹ : ಘಟಪ್ರಭಾದಲ್ಲಿ ಘಟನೆ

ಘಟಪ್ರಭಾ:ಆಸ್ತಿಗಾಗಿ ಕೊಲೆಯಲ್ಲಿ ಅಂತ್ಯಗೊಂಡ ಸಹೋದರರ ಕಲಹ : ಘಟಪ್ರಭಾದಲ್ಲಿ ಘಟನೆ 

ಆಸ್ತಿಗಾಗಿ ಕೊಲೆಯಲ್ಲಿ ಅಂತ್ಯಗೊಂಡ ಸಹೋದರರ ಕಲಹ : ಘಟಪ್ರಭಾದಲ್ಲಿ ಘಟನೆ
ಘಟಪ್ರಭಾ ಅ 9: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣ – ತಮ್ಮಂದಿರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ
ಅಂತ್ಯವಾಗಿರುವ ಘಟನೆ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ
ಬಸಪ್ಪಾ ಮಾಲದಿನ್ನಿ(50) ಎಂಬಾತ ಬರ್ಬರವಾಗಿ ಕೊಲೆಯಾಗಿರುವ ವ್ಯಕ್ತಿ. ಕೊಲೆಯಾದ ಬಸಪ್ಪನ ಮಕ್ಕಳಾದ ಚಂದ್ರು ಮಾಲದಿನ್ನಿ, ಶ್ರೀಕಾಂತ ಮಾಲದಿನ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಘಟಪ್ರಭಾದ ಕೆಹೆಚ್‌ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆಯಲ್ಲಿ ಗಾಯಗೊಂಡಿರುವ ಕೊಲೆ ಆರೋಪಿ ರಾಮಪ್ಪ ಮಾಲದಿನ್ನಿಯನ್ನು ಬೆಳಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ನಿನ್ನೆ ಸಂಜೆ ಈ ಕೊಲೆ ನಡೆದಿದ್ದು, ಇಂದು ನಾಲೆಯಲ್ಲಿ ಬಸಪ್ಪನ ಶವ ಪತ್ತೆಯಾಗಿದೆ. ಈ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: