RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ಚಿತ್ತರಾಗಿ ನೆಮ್ಮದಿಯ ಬದುಕು ಸಾಧ್ಯ : ಪ್ರಿಯಾಂಕ ಟಿ. ಕೆ

ಗೋಕಾಕ:ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ಚಿತ್ತರಾಗಿ ನೆಮ್ಮದಿಯ ಬದುಕು ಸಾಧ್ಯ : ಪ್ರಿಯಾಂಕ ಟಿ. ಕೆ 

ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ಚಿತ್ತರಾಗಿ ನೆಮ್ಮದಿಯ ಬದುಕು ಸಾಧ್ಯ : ಪ್ರಿಯಾಂಕ ಟಿ. ಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 11 :

 
ಯೋಗದಿಂದ ಮಾನಸಿಕ ವಿಕಾರತೆ ದೂರವಾಗಿ ಶಾಂತ ಚಿತ್ತರಾಗಿ ನೆಮ್ಮದಿಯ ಬದುಕು ಸಾಧ್ಯವೆಂದು ಪ್ರಧಾನ ದಿವಾಣಿ ಹಾಗೂ ಜೆ.ಎಂ.ಎಫ್ .ಸಿ ನ್ಯಾಯಾಧೀಶರಾದ ಪ್ರಿಯಾಂಕ ಟಿ. ಕೆ ಹೇಳಿದರು.

ಶನಿವಾರದಂದು ನಗರದ ಉಪ ಕಾರಾಗೃಹದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ , ಉಪ ಕಾರಾಗೃಹ , ಜೆಸಿಐ ಸಂಸ್ಥೆ, ಪಂತಜಲಿ ಹಾಗೂ ಆರೋಗ್ಯ ಭಾರತಿ ಇವುಗಳ ಸಂಯುಕ್ತಾಶ್ರಯದಲ್ಲಿ ಉಪ ಕಾರಾಗೃಹ ಸಿಬ್ಬಂದಿ ಮತ್ತು ಬಂಧಿಗಳಿಗೆ ಹಮ್ಮಿಕೊಂಡ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಯೋಗವು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ. ಇದನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಬಂಧಿಗಳು ತಮ್ಮ ತಪ್ಪಗಳನ್ನು ತಿದ್ದಿಕೊಂಡು ಉತ್ತಮ ನಾಗರಿಕರನ್ನಾಗಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗದಿಂದ ಸಮಾಜದಲ್ಲಿ ಗೌರವಾನ್ವಿತ ಬದುಕು ಸಾಗಿಸುವಂತೆ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಯೋಗ ಹಾಗೂ ಶಿವಯೋಗದಿಂದ ಶರೀರದೊಂದಿಗೆ ಆತ್ಮವನ್ನು ಗಟ್ಟಿಗೊಳಿಸಿಕೊಳ್ಳಿ . ಹೊನ್ನು , ಹೆಣ್ಣು ,ಮಣ್ಣು ಈ ಮೂರು ವಿಷಯಗಳನ್ನು ಹತೋಟಿಯಲ್ಲಿಟ್ಟರೆ ಅಪರಾಧ ಗಳಾಗುವದಿಲ್ಲ ಮನಸ್ಸನ್ನು ನಿಗ್ರಹ ಮಾಡಿ ಮಾನವಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಪ್ರಜೆಗಳಾಗಿ ಎಂದು ಹೇಳಿದರು.
ವೇದಿಕೆಯಲ್ಲಿ ಒಂದನೇ ಹೆಚ್ಚುವರಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಶೋಭಾ, ಉಪ ಕಾರಾಗೃಹ ಅಧೀಕ್ಷಕ ಅಂಬರೀಷ್ ಪೂಜಾರಿ, ಸಹಾಯಕ ಅಧೀಕ್ಷಕರಾದ ಎ.ಕೆ ಅನ್ಸಾರಿ, ಎಂ.ಕೆ ನೆಲಧರಿ, ಜೆಸಿಐ ಅಧ್ಯಕ್ಷರಾದ ರಜನಿಕಾಂತ ಮಾಳೋದೆ , ಭಾಗಿರಥಿ ನಂದಗಾವಿ, ಯೋಗಗುರು ನಿಜಲಿಂಗ ಡಡ್ಡಿಮನಿ, ಪ್ರಮೋದ್ ಗುಲ್ಲ ಇದ್ದರು.
ಶಕೀಲ ಜಕಾತಿ ಸ್ವಾಗತಿಸಿ ವಂದಿಸಿದರು.

Related posts: