ಗೋಕಾಕ:ಭಾವಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತವೆ : ಮುರುಘರಾಜೇಂದ್ರ ಸ್ವಾಮಿಜಿ ಅಭಿಮತ
ಭಾವಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತವೆ : ಮುರುಘರಾಜೇಂದ್ರ ಸ್ವಾಮಿಜಿ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 6 :
ಭಾವನೆಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ರವಿವಾರದಂದು ನಗರದ ನಗರದ ಲಕ್ಕಡ ಗಲ್ಲಿಯಲ್ಲಿ ನವೀಕರಣಗೊಂಡ ಹಜರತ್ ಅಹ್ಮದಶಾ ಶಾದಿ ಮಹಲ ಉದ್ಘಾಟನೆ ಹಾಗೂ ಹಜರತ್ ಅಹ್ಮದಶಾ ಖಾದರಿ ದರ್ಗಾದ ಉರುಸ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು.
ದೇವರು ಒಬ್ಬನೆ ನಾಮ ಹಲವು ಎಂದು ಮಹಾತ್ಮಾರು ಸಾರಿದ್ದಾರೆ ಇದನ್ನೇ ಇಸ್ಮಾಂ ಧರ್ಮ ಹೇಳುತ್ತದೆ. ಲಿಂಗಾಯತ ಧರ್ಮವು ಸಹ ಇದನ್ನೇ ಸಾರಿ ಹೇಳಿದೆ.ಆಚರಣೆಗಳಲ್ಲಿ ಲಿಂಗಾಯತ ಮತ್ತು ಇಸ್ಮಾಂ ಧರ್ಮ ಒಂದೇಯಾಗಿವೆ. ನಮಾಜ, ರೋಜಾ, ಜಕಾತ, ಹಜ್ ಎಂಬ ತತ್ವದಡಿ ಇಸ್ಮಾಂ ಧರ್ಮ ನಿಂತಿದೆ. ಆ ದಿಸೆಯಲ್ಲಿ ಇಸ್ಮಾಂ ಸಮಾಜ ಬಾಂಧವರು ಸಮಾದಲ್ಲಿ ಭಾವೈಕತೆಯ ಸಾರುವ ಕಾರ್ಯ ಮಾಡಬೇಕು.
ಸೂಫಿ , ಸಂತರು ಸರ್ವ ಧರ್ಮದ ಉದ್ಧಾರಕರು, ಮನುಷ್ಯರೆಲ್ಲರೂ ಒಂದೇ.ಎಲ್ಲರೂ ದೇವರ ಮಕ್ಕಳು, ಸಂತರು, ಸೂಫಿಗಳು ಯೋಗಿಗಳನ್ನು, ಋಷಿಗಳನ್ನು, ಭೋಗಿಗಳನ್ನು ಪ್ರೀತಿಸಿದರವರು , ಇಸ್ಮಾಂ ಧರ್ಮದಲ್ಲಿ ಸಮಾದಿಗಳ ಮುಂದೆ ಕುತೂ ಬೇಡಿಕೊಳ್ಳವ ಪದ್ಧತಿ ಇಲ್ಲಾ , ಪ್ರತಿಯೊಬ್ಬರಲ್ಲಿ ದೇವರು ಇದ್ದಾನೆ ತಮ್ಮನ್ನು ತಾವು ಪ್ರೀತಿಸಿದರೆ ಅದೆ ಸನ್ಮಾರ್ಗ ಆ ಸನ್ಮಾರ್ಗದಲ್ಲಿ ನಡೆದು ನಾವೆಲ್ಲರೂ ಒಂದಾಗಿ ಬಾಳಬೇಕಾಗಿದೆ. ಇಂತಹ ಸಂಬಂಧಗಳನ್ನು ಬೆಸೆಯಲು ಶ್ರೀ ಮಠದಿಂದ ಹಲವಾರು ಭಾವನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದ್ದೆ ಇದರ ಸದುಪಯೋಗವನ್ನು ಎಲ್ಲ ಸಮಾಜದ ಜನರು ಪಡೆದುಕೊಳ್ಳಬೇಕೆಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಮೌಲಾನಾ ಬಶೀರ ಉಲ್ಲ ಹಕ್ಕ ಕಾಶಮಿ ಮಾತನಾಡಿ ಸಮುದಾಯಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಸಮಾಜ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಆಗಲು ಸಾಧ್ಯ. ಯುವಕರು ಈ ದೇಶದ ಆಸ್ತಿ ಸಮೃದ್ಧ , ಸದೃಢ ದೇಶ ನಿರ್ಮಾಣ ಮಾಡಲು ಯುವಕರು ಮುಂದಾಗಬೇಕು . ಒಳ್ಳೆಯ ವಿಚಾರಗಳಿಂದ ದೇಶವನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ ಆ ದಿಸೆಯಲ್ಲಿ ನಾವೆಲ್ಲರೂ ಒಂದಾಗಿ ಭಾವೈಕತೆಯಿಂದ ತಮ್ಮ ಜೀವನ ನಡೆಸಬೇಕು ಎಂದರು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ನವೀಕರಣಗೊಂಡ ಶಾದಿ ಮಹಲನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸ್ಥಾಯಿ ಸಮಿತಿ ಚೇರಮನ್ ಕೆ.ಎಂ ಗೋಕಾಕ, ನಗರಸಭೆ ಸದಸ್ಯ ಯೂಸುಫ್ ಅಂಕಲಗಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಮುಖಂಡರುಗಳಾದ ದುರ್ಗಪ್ಪ ಶಾಸ್ತ್ರಿಗೋಲ್ಲರ, ಹುಸೇನ ಫನಿಬಂದ, ಸಲಿಮ ಡಾಂಗೆ, ನಜೀರ ಶೇಖ್, ಇಲಾಹಿ ಖೈರದಿ, ಮಲ್ಲಿಕ ಪೈಲವಾನ, ಶಕೀಲ ಧಾರವಾಡಕರ, ಹಾಫಿಜ್ ಯುನೂಸ, ಇಸ್ಮಾಯಿಲ್ ಜಮಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.