ಗೋಕಾಕ:ಜೆಸಿಐ ವತಿಯಿಂದ ಉಪಕಾರಗೃಹದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ
ಜೆಸಿಐ ವತಿಯಿಂದ ಉಪಕಾರಗೃಹದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 21 :
ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ವಿಶ್ವ ಹಿಂದು ಪರಿಷತ್ತಿನ ಬೆಳಗಾವಿ ವಿಭಾಗದ ಕಾರ್ಯದರ್ಶಿ ನಾರಾಯಣ ಮಠಾಧೀಕಾರಿ ಹೇಳಿದರು.
ಸೋಮವಾರದಂದು ನಗರದ ಉಪ ಕಾರಾಗೃಹದಲ್ಲಿ ಇಲ್ಲಿನ ಜೆ.ಸಿ.ಐ ಸಂಸ್ಥೆಯವರು ಹಮ್ಮಿಕೊಂಡ ವಿಶ್ವ ಯೋಗ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿಶ್ವಾದ್ಯಂತ ಜನ ಯೋಗಕ್ಕೆ ಮಾರುಹೋಗಿ ಅದನ್ನು ಆಚರಣೆಗೆ ತಂದಿದ್ದಾರೆ. ನಾವೆಲ್ಲರೂ ನಿತ್ಯ ಯೋಗ ಮಾಡುವುದನ್ನು ರೂಡಿ ಮಾಡಿಕೊಳ್ಳಬೇಕು. ಯೋಗದಿಂದ ಉತ್ತಮ ಆರೋಗ್ಯದೊಂದಿಗೆ ಸಾತ್ವಿಕ ಜೀವನವನ್ನು ನಡೆಸಲು ಸಾಧ್ಯ. ಕೋರೋನಾದಂತಹ ರೋಗಗಳಿಂದಲೂ ರಕ್ಷಣೆ ಪಡೆದು ಆರೋಗ್ಯವಂತರಾಗಿ ಜೀವನ ನಡೆಸಬಹುದಾಗಿದೆ. ಎಲ್ಲರು ಯೋಗದಿಂದ ಆರೋಗ್ಯವಂತರಾಗಿ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ನಂತರ ಉಪಕಾರಗೃಹದ
ವಿಚಾರಣಾಧೀನ ಖೈದಿಗಳಿಗೆ ಯೋಗ ತರಬೇತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಪಕಾರಗೃಹದ ಅಧೀಕ್ಷಕ ಅಂಬರೀಷ್ ಪೂಜಾರಿ, ಸಹಾಯಕ ಜೈಲರಗಳಾದ ಎ.ಕೆ ಅನ್ಸಾರಿ, ಎಂ.ಕೆ ನೆಲಧರಿ, ಜೆಸಿಐ ಅಧ್ಯಕ್ಷ ಚಂದ್ರಶೇಖರ ಕಡೆವಾಡಿ, ಪದಾಧಿಕಾರಿಗಳಾದ ವಿಷ್ಣು ಲಾತೂರ, ಶೇಖರ ಉಳ್ಳಾಗಡ್ಡಿ, ಎಂ.ಎಸ್.ವಾಲಿ, ಮಲ್ಲಪ್ಪ ಮದಿಹಳ್ಳಿ,ಯೋಗ ತರಬೇತಿದಾರರಾದ ನಾಗರಾಜ ಘಟಪಂದಿ, ಚೂನಪ್ಪ ಹಟ್ಟಿ ಇದ್ದರು.
ಜೈಲು ಸಿಬ್ಬಂದಿ ಶಕೀಲ ಜಕಾತಿ ಸ್ವಾಗತಿಸಿ , ವಂದಿಸಿದರು.