RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಗೋಕಾಕ:ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ 

ಅರಭಾವಿ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಸೆ 9 : ಪ್ರಧಾನಿ ನರೇಂದ್ರ ಮೋದಿಯವರು 2018ರೊಳಗೆ ಭಾರತವನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು, ಈ ಮಾದರಿಯಲ್ಲಿ ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಡಿಸೆಂಬರ ತಿಂಗಳೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರ ಸಂಜೆ ಜರುಗಿದ ಕ್ಷೇತ್ರದ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಓ ಹಾಗೂ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಪ್ರಾಯೋಗಿಕವಾಗಿ 11 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಅನುದಾನದಲ್ಲಿ ಈ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಎಸ್‍ಸಿ, ಎಸ್‍ಟಿ ಕುಟುಂಬಗಳಿಗೆ 15 ಸಾವಿರ ಹಾಗೂ ಇತರೇ ಬಿಪಿಎಲ್ ಕುಟುಂಬಗಳಿಗೆ 12 ಸಾವಿರ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. ಕುರಣಿಯ ವಿವೇಕಾನಂದ ಸೌಹಾರ್ದ ಸಹಕಾರಿಯ ಸಹಕಾರದಿಂದ ಅರಭಾವಿ ಕ್ಷೇತ್ರದಲ್ಲಿ ಶೌಚಾಲಯಗಳು ನಿರ್ಮಾಣವಾಗಲಿವೆ. ಹೆಣ್ಣು ಮಕ್ಕಳ ಗೌರವ, ಸ್ವಾಭಿಮಾನ ಹಾಗೂ ಸಮಾನತೆಯ ದೃಷ್ಟಿಯಿಂದ ಇಂತಹ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಗ್ರಾಮ ಪಂಚಾಯತಿ ಸಮೀತಿಯವರು ಹೆಚ್ಚಿನ ಆಸಕ್ತಿ ತೆಗೆದುಕೊಂಡು ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ದುರದುಂಡಿ, ತುಕ್ಕಾನಟ್ಟಿ, ಬಳೋಬಾಳ, ಹಳ್ಳೂರ, ಯಾದವಾಡ, ಢವಳೇಶ್ವರ, ಹುಣಶ್ಯಾಳ ಪಿವಾಯ್, ಮಸಗುಪ್ಪಿ, ಗೋಸಬಾಳ, ಲೋಳಸೂರ ಹಾಗೂ ಸುಣಧೋಳಿ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿದ್ದು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ 300 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈ ಯೋಜನೆ ಯಶಸ್ವಿ ನಂತರ ಎಲ್ಲ ಗ್ರಾಮಗಳಲ್ಲಿ ಇಂತಹ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಎಸ್‍ಸಿ-ಎಸ್‍ಟಿ ಜನಾಂಗಕ್ಕೆ ಶೌಚಾಲಯಗಳನ್ನು ಸರ್ಕಾರದ ಅನುದಾನದಲ್ಲಿಯೇ ಉಚಿತವಾಗಿ ನಿರ್ಮಿಸಿಕೊಡಲಾಗುವುದು. ನಿರ್ಮಾಣದ ಉಸ್ತುವಾರಿ ಹೊತ್ತಿರುವ ವಿವೇಕಾನಂದ ಸೌಹಾರ್ದ ಸಹಕಾರಿಗೆ ಪ್ರತಿ ಎಸ್‍ಸಿ-ಎಸ್‍ಟಿ ಶೌಚಾಲಯ ನಿರ್ಮಾಣಕ್ಕೆ 500 ರೂ.ಗಳು ಹಾಗೂ ಬಿಪಿಎಲ್ ಕುಟುಂಬಗಳಿಗೆ ಸರ್ಕಾರದಿಂದ 12 ಸಾವಿರ ರೂ ಅನುದಾನ ಬರುತ್ತಿದ್ದು, ಉಳಿದ 3 ಸಾವಿರ ರೂ.ಗಳು ಸೇರಿ ಒಟ್ಟು ಪ್ರತಿ ಶೌಚಾಲಯಕ್ಕೆ 3500 ರೂ.ಗಳನ್ನು ಸ್ವತಃ ನಾನೇ ಭರಿಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಾಗ್ದಾನ ಮಾಡಿದರು.

ಮುಖಂಡ ನಾರಾಯಣ ಮಠಾಧಿಕಾರಿ ಮಾತನಾಡಿ, ಅರಭಾವಿ ಕ್ಷೇತ್ರದ ವಿಕಾಸಕ್ಕೆ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ. ಸಮಗ್ರ ಗ್ರಾಮೀಣ ಅಭಿವೃದ್ಧಿ ದೃಷ್ಟಿಯಿಂದ ಬಾಲಚಂದ್ರ ಜಾರಕಿಹೊಳಿ ಗ್ರಾಮ ವಿಕಾಸ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಈ ಮೂಲಕ ಕ್ಷೇತ್ರದಲ್ಲಿ ಬಡಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗುತ್ತಿದೆ. ಯಮಕನಮರಡಿ ಕ್ಷೇತ್ರದಲ್ಲಿ ಈಗಾಗಲೇ ಸಾವಿರ ಶೌಚಾಲಯಗಳನ್ನು ನಿರ್ಮಿಸಿರುವ ಕುರಣಿಯ ಸಂಸ್ಥೆಯು ಅರಭಾವಿಯಲ್ಲಿ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿದೆ ಎಂದು ಹೇಳಿದರು.
ಕುರಣಿ ವಿವೇಕಾನಂದ ಕ್ರೆಡಿಟ್ ಸಹಕಾರಿಯ ಅಧ್ಯಕ್ಷ ಗಿರೀಶ ಕಡೆ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಮಾಜಿ ಜಿಪಂ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಬಸವಂತ ಕಮತಿ, ತಾಪಂ ಇಓ ಎಫ್.ಜಿ. ಚಿನ್ನನ್ನವರ, ಎಇಇ ಐ.ಎಂ. ದಫೇದಾರ, ಮುಂತಾದವರು ಉಪಸ್ಥಿತರಿದ್ದರು.

Related posts: