ಗೋಕಾಕ:ದಲಿತರ ಮುಖಂಡರು ಸಂಘಟಿತರಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸಿ : ಡಾ: ಹೊಂಬಯ್ಯ
ದಲಿತರ ಮುಖಂಡರು ಸಂಘಟಿತರಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸಿ : ಡಾ: ಹೊಂಬಯ್ಯ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 9 :
ದಲಿತರ ಮುಖಂಡರು ಸಂಘಟಿತರಾಗಿ ಸಂವಿಧಾನದಲ್ಲಿ ಡಾ: ಬಿ.ಆರ್. ಅಂಬೇಡ್ಕರ ಅವರು ಕಲ್ಪಿಸಿರುವ ಸೌಲಭ್ಯಗಳನ್ನು ಸಮುದಾಯದ ಜನರಿಗೆ ತಲುಪಿಸಿ ಸಮಾಜದ ಅಭಿವೃದ್ದಿಗೆ ಶ್ರಮಿಸುವಂತೆ ಚಿಕ್ಕೋಡಿಯ ಪ್ರಾಧ್ಯಾಪಕ ಡಾ: ಹೊಂಬಯ್ಯ ಹೊನ್ನಲಗೆರೆ ಹೇಳಿದರು.
ಮಂಗಳವಾರದಂದು ನಗರದ ಡಾಲರ್ಸ್ ಕಾಲೋನಿಯ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಮಟ್ಟದ ದಲಿತರ ಐಕ್ಯತೆಗಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದಲಿತ ಸಮುದಾಯವನ್ನು ರಾಜಕಾರಣಿಗಳು ತಮ್ಮ ಮತಗಳ ಬ್ಯಾಂಕ್ಗಳಾಗಿ ಮಾಡಿದ್ದಾರೆ. ಸಮಾಜದ ಅಭಿವೃದ್ದಿಗೆ ಸಹಕಾರ ನೀಡದೇ ಸಮಾಜವನ್ನು ಒಡೆದು ಸಮಾಜದ ಶಕ್ತಿಯನ್ನು ಕುಂದಿಸುತ್ತಿದ್ದಾರೆ. ಡಾ: ಬಿ.ಆರ್. ಅಂಬೇಡ್ಕರ ಅವರು ಸಂವಿಧಾನದಲ್ಲಿ ಕಲ್ಪಿಸಿರುವ ಸೌಲಭ್ಯಗಳು ಸರಿಯಾಗಿ ಆಚರಣೆಗೆ ಬರುತ್ತಿಲ್ಲ. ಅಸ್ಪøಶತೆ ಇನ್ನೂ ಆಚರಣೆಯಲ್ಲಿದೆ, ಸಮುದಾಯದ ಮೇಲೆ ಶೋಷಣೆ, ಹತ್ಯೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಲೇ ಇವೆ. ಇದಕ್ಕೆಲ್ಲ ಪರಿಹಾರ ನಾವೆಲ್ಲ ಜಾಗೃತರಾಗಿ ಹೋರಾಡಬೇಕಾಗಿದೆ. ಈ ಹೋರಾಟಕ್ಕೆ ಮಹಿಳೆಯರು, ಯುವ ಜನಾಂಗ ಕೈಜೋಡಿಸಿ ಸಮಾಜದ ಅಭಿವೃದ್ದಿಗೆ ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ವಹಿಸಿದ್ದರು, ದಿವ್ಯ ಸಾನಿಧ್ಯವನ್ನು ಬಸವನ ಬೆಳವಿಯ ಶ್ರೀ ಚರಮೂರ್ತಿ ಚರಂತೇಶ್ವರ ಬಸವ ದೇವರು ವಹಿಸಿದ್ದರು.
ವೇದಿಕೆ ಮೇಲೆ ಮುಖಂಡರಾದ ಸಂದುಸಾಹೇಬ ಚವಡಾಪೂರ, ಭೀಮಪುತ್ರ ಸಂತೋಷ, ಅಂಬರೀಷ ಪೂಜಾರಿ, ಮಾರುತಿ ಹರಿಜನ, ಅಶೋಕ ಲಗಮಪ್ಪಗೋಳ, ಲಕ್ಷ್ಮಣ ತೆಳಗಡೆ, ಎಬಿನೇಜರ್ ಕರಬನ್ನವರ, ಶಾಂತಪ್ಪ ಹಿರೇಮೇತ್ರಿ, ಅಶೋಕ ಉದ್ದಪ್ಪನವರ, ಸಾಬಪ್ಪ ಸಣ್ಣಕ್ಕಿ, ಗೋಪಾಲ ಹರಿಜನ, ರಮೇಶ ಈರಗಾರ, ರಾಮಣ್ಣ ಈಟಿ, ಮಲ್ಲಪ್ಪ ಅಮ್ಮಣ್ಣಗಿ, ಪ್ರಭಾಕರ ಬಂಗೇನ್ನವರ, ರಾಜು ಪರಸನ್ನವರ, ಭೀಮಶಿ ಕಂಕಣವಾಡಿ, ಸತೀಶ ಹರಿಜನ ಇದ್ದರು.
ಸುರೇಶ ಮೂಡಲಗಿ ಸ್ವಾಗತಿಸಿದರು, ರಮೇಶ ಕೋಲಕಾರ ನಿರೂಪಿಸಿದರು, ವಿಲ್ಸನ್ ಖಾನಟ್ಟಿ ವಂದಿಸಿದರು.