ಗೋಕಾಕ:ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ
ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :
ವಚನಕಾರರು ಶಬ್ದ ಸೋಪಾನಗಳ ಮೂಲಕ ನಿಶ್ಯಬ್ದದ ಕಟ್ಟೆ ಕಟ್ಟಿ, ನಿರಂಕಾರವಾಗಿರುವ ಭಗವಂತನ ರೂಪ ಸಾಮಥ್ರ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಆತ್ಮೋನ್ನತ್ತಿಗೆ ಶ್ರಮಿಸಿದ್ದರು ಎಂದು ನಂದಿಇಂಗಳಗಾಂವಿಯ ಶ್ರೀ ಗುರುಲಿಂಗ ದೇವರಮಠದ ಪೂಕ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಶೂನ್ಯ ಸಂಪಾದನಮಠದಲ್ಲಿ ಮಾಸಿಕ ಹುಣ್ಣಿಮೆ ನಿಮಿತ್ಯ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಮತ್ತು ವಚನಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 145ನೇ ಶಿವಾನುಭವ ಗೋಷ್ಠಿಯಲ್ಲಿ ಚಿಂತನಕಾರರಾಗಿ ಭಾಗವಹಿಸಿ ಮುಕ್ತಾಯಕ್ಕ ಮತ್ತು ಅಲ್ಲಮಪ್ರಭುದೇವರ ಸಂವಾದ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ನಾನು ಎಂಬ ಅಹಂಕಾರ ಸಲ್ಲದು, ದೇಹ ನಾಶವಾಗುತ್ತದೆ. ಆತ್ಮ ಶಕ್ತಿಗೆ ಶರೀರ ಆಧಾರ, ಆಶ್ರಯಸ್ಥಾನವಾಗಿದ್ದು ಕಾಯದ ಮೇಲಿನ ಮೋಹವನ್ನು ಕಳೆದುಕೊಳ್ಳಬೇಕೆಂದು ತಿಳಿಸಿದ ಅವರು ಅಲ್ಲಮಪ್ರಭು ದೇವರು ವ್ಯೂಮಕಾಯ, ನಿರಾಕಾರ ಜಂಗಮರಾಗಿದ್ದರು. ತಮ್ಮ ಅಪಾರ ಪಾಂಡಿತ್ಯ ಪ್ರಭಾವದಿಂದ ಮುಕ್ತಾಯಕ್ಕನ ಜ್ಞಾನವನ್ನು ಓರೆಗೆ ಹಚ್ಚಿ ವಚನಕಾರ್ತಿಯನ್ನಾಗಿ ರೂಪಿಸಿದರು ಎಂದು ಹೇಳಿದರು.
ದಿವ್ಯ ಸಾನಿಧ್ಯವಹಿಸಿದ್ದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡುತ್ತಾ ಬರುವ ಮಾರ್ಚ 1ರಿಂದ 3ರವರೆಗೆ ಜರುಗಲಿರುವ ಶರಣ ಸಂಸ್ಕøತಿ ಉತ್ಸವಕ್ಕೆ ಭಕ್ತರು ತನು,ಮನ, ಧನದಿಂದ ಸಹಾಯ ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಬಟಕುರ್ಕಿಯ ಬಸವಲಿಂಗ ಸ್ವಾಮಿಜಿ, ಬಸನಗೌಡ ಪಾಟೀಲ, ಡಾ: ಸಿ.ಕೆ.ನಾವಲಗಿ, ಶಕುಂತಲಾ ಕಟ್ಟಿ, ಮೈಲಾರಲಿಂಗ ಉಪ್ಪಿನ, ಡಿ.ಎನ್.ಬೆಟ್ಟದಗೌಡರ, ಸುಗಂಧಾ ಡಂಬಳ ಇದ್ದರು.
ಎಸ್.ಕೆ.ಮಠದ ಸ್ವಾಗತಿಸಿದರು. ವಿಜಯಲಕ್ಷ್ಮೀ ಹಿರೇಮಠ ನಿರೂಪಿಸಿದರು.ಆರ್.ಎಲ್.ಮಿರ್ಜಿ ವಂದಿಸಿದರು.