RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ : ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ : ಪ್ರಕಾಶ ಹೋಳೆಪ್ಪಗೋಳ 

ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ : ಪ್ರಕಾಶ ಹೋಳೆಪ್ಪಗೋಳ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 5 :

 
ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು

ಶನಿವಾರದಂದು ತಾಲೂಕಿನ ಗೋಕಾಕ ಫಾಲ್ಸದ ದಿ.ವೊಲ್ಡಕ್ಯಾಟ್ ಅಕ್ಯಾಡಮಿ ಶಾಲಾ ಆವರಣದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 133ನೇ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು

ದೇಶದ ಅಭಿವೃದ್ಧಿ ಶಿಕ್ಷಣವನ್ನೇ ಅವಲಂಭಿಸಿದೆ. ಗುರುಗಳ ಮಾರ್ಗದರ್ಶನದಿಂದ ವ್ಯವಸ್ಥಿತವಾದ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ನಮ್ಮೆಲ್ಲರಿಗೂ ಲೌಕಿಕ , ಅಲೌಕಿಕ ಜ್ಞಾನವನ್ನು ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿದ್ದರಿಂದಲೆ ಅವರು ಸದಾ ನಮ್ಮ ಮನದಲ್ಲಿ ನೆಲೆಸಿದ್ದಾರೆ. ಶಿಕ್ಷಕರ ವೃತ್ತಿ ಮೌಲ್ಯಾಧಾರಿತ ವೃತ್ತಿಯಾಗಿದ್ದು, ಅನಾಧಿಕಾಲದಿಂದಲೂ ಸಮಾಜ ಗೌರವಿಸುತ್ತಾ ಬಂದಿದೆ. ನಿಮ್ಮಿಂದ ಇನ್ನೂ ಹೆಚ್ಚಿನ ಮಾರ್ಗದರ್ಶನ ಸಮಾಜಕ್ಕೆ ಸಿಗಲೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಪಂ ಇಓ ಬಸವರಾಜ ಹೆಗ್ಗನಾಯಿಕ ಶಿಕ್ಷಕ ವೃತ್ತಿಯನ್ನು ಸಮಾಜದ ಎಲ್ಲಾ ವರ್ಗದ ಜನರು ಗೌರವಿಸುತ್ತಾರೆ. ಶಿಕ್ಷಕರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ ಪುರುಷರು ಮಕ್ಕಳ ತಪ್ಪುಗಳನ್ನು ತಿದ್ದಿ ಅವರನ್ನು ಬೆಳೆಸುವ ಮಹತ್ವದ ಜವಾಬ್ದಾರಿ ಶಿಕ್ಷಕರದ್ದು, ಸಮಾಜದಲ್ಲಿ ಶಾಂತ ಸುವ್ಯವಸ್ಥೆ ನೆಲೆಸಲು ಶಿಕ್ಷಕರ ಪಾತ್ರ ಮಹತ್ವದಾಗಿದೆ. ವಿದ್ಯಾರ್ಥಿಗಳು ದೇಶದ ಆಸ್ತಿ. ಯುವ ಸಮುದಾಯದ ಮೇಲೆ ದೇಶದ ಭವಿಷ್ಯ ನಿಂತಿದೆ. ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ಕಲಿಸುವ ಕಾರ್ಯ ಶಿಕ್ಷಕರಿಂದ ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಬಸವರಾಜ ಹೆಗ್ಗನಾಯಿಕ ಹೇಳಿದರು.

ವೇದಿಕೆಯ ಮೇಲೆ ತಾಪಂ ಅಧ್ಯಕ್ಷರಾದ ಶ್ರೀಮತಿ ಸುನಂದಾ ಕರದೇಸಾಯಿ , ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಇದ್ದರು.

ಮುಖ್ಯೋಪಾಧ್ಯಾಯ ಗೋಪಾಲ ಮಾಳಗಿ ಸ್ವಾಗತಿಸಿದರು.ಶಿಕ್ಷಕ ಆರ್.ಎಲ್ ಮಿರ್ಜಿ ನಿರೂಪಿಸಿದರು . ಕ್ಷೇತ್ರ ಸಮ್ಮನ್ವಯಾಧಿಕಾರಿ ಎಂ.ಬಿ ಪಾಟೀಲ ವಂದಿಸಿದರು.

Related posts: