RNI NO. KARKAN/2006/27779|Monday, June 16, 2025
You are here: Home » breaking news » ಬೆಳಗಾವಿ:ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದು ಯಾರ ದುಡ್ಡಿಂದ ಅಂತಾ ಆಣೆ ಪ್ರಮಾಣ ಮಾಡಲಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ರಮೇಶ್ ಜಾರಕಿಹೊಳಿ‌ ಸವಾಲ್

ಬೆಳಗಾವಿ:ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದು ಯಾರ ದುಡ್ಡಿಂದ ಅಂತಾ ಆಣೆ ಪ್ರಮಾಣ ಮಾಡಲಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ರಮೇಶ್ ಜಾರಕಿಹೊಳಿ‌ ಸವಾಲ್ 

ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದು ಯಾರ ದುಡ್ಡಿಂದ ಅಂತಾ ಆಣೆ ಪ್ರಮಾಣ ಮಾಡಲಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ರಮೇಶ್ ಜಾರಕಿಹೊಳಿ‌ ಸವಾಲ್

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 8 :

 

 

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ಡುಡ್ಡಿಂದ ಅಂತಾ ಆಣೆ ಪ್ರಮಾಣ ಮಾಡಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸವಾಲ್ ಹಾಕಿದ್ದಾರೆ.

ಬುಧವಾರದಂದು ಮಹಾರಾಷ್ಟ್ರ ಸರಕಾರ ನೀರಾವರಿ ಸಚಿವರನ್ನು ಭೇಟಿಯಾಗಲು ತೆರಳುವ ಸಂದರ್ಭದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾನು ಅವಳಿಗೆ ದುಡ್ಡು ಕೊಟ್ಟಿಲ್ಲ ಅಂತಾ ಅವರ ಮನೆ ದೇವರು ಹಟ್ಟಿ ವೀರಭದ್ರೇಶ್ವರ ಮೇಲೆ ಆಣೆ ಮಾಡಿ ಹೇಳಲಿ. ನನ್ನ ಮನೆ ದೇವರಾದ ಕೊಲ್ಲಾಪುರ ಲಕ್ಷ್ಮೀ ದೇವರ ಮೇಲೆ ನಾನು ಆಣೆ ಮಾಡಲು ನಾನು ಸಿದ್ಧ.
ನನ್ನ ಉಪಕಾರ ಇಲ್ಲದೇ ಆರಿಸಿ ಬಂದಿದ್ದಾಳೆ ಎಂದು ಆಣೆ ಮಾಡಲಿ ಎಂದು ಸಚಿವ ರಮೇಶ ಹೆಬ್ಬಾಳ್ಕರ ಅವರ ಕಾನೂನು ಹೋರಾಟದ ಹೇಳಿಕೆಗೆ ತಿರಿಗೆಟು ನೀಡಿದರು.

ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತರಲು ವಾಸ್ತವ ಸ್ಥಿತಿ ಹೇಳಿದ್ದೇ‌ನೆ.ಇಡೀ ರಾಜ್ಯಕ್ಕೆ ಗೊತ್ತಿದೆ, ಲಕ್ಷ್ಮೀ ಹೆಬ್ಬಾಳ್ಕರ್ ಯಾರಿಂದ ಆರಿಸಿ ಬಂದಿದ್ದಾರೆ. ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ.ಬುಡಾ ಮೆಂಬರ್ ಮಾಡು ಅಂತಾ ಕಾಲು ಬಿದ್ದು ನನ್ನ ಬಳಿ ಕೇಳಿದ್ದಳು. ನಮ್ಮ ಮನೆದೇವರು ಲಕ್ಷ್ಮೀದೇವಿ ಮೇಲೆ ಆಣೆ ನನ್ನ ಕಾಲು ಬಿದ್ದು ಬೇಡಿಕೊಂಡಿದ್ದಳು ಎಂದ ಸಚಿವರು ಲಿಂಗಾಯತ ಹೆಣ್ಣು ಮಗಳು ಬೆಳೆಯಲಿ ಅಂತಾ ಒಳ್ಳೆಯ ಉದ್ದೇಶಕ್ಕೆ ಸಹಾಯ ಮಾಡಿದ್ದೆ.

ಅವಳ ಪ್ರತಿಕ್ರಿಯೆಗಳಿಗೆ ಮುಂದಿನ ದಿನಗಳಲ್ಲಿ ನಾನು ತೋರಿಸುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್ ವ್ಯಕ್ತಿತ್ವ ಬೆಳಗಾವಿ ಜಿಲ್ಲೆಯ ಮೂಲೆಮೂಲೆಗೂ ಗೊತ್ತಿದೆ.ನಮ್ಮ ರಣತಂತ್ರ ಏನೆಂಬುದು ಮುಂದೆ ಚುನಾವಣೆಯಲ್ಲಿ ತೋರಿಸುತ್ತೇನೆ.
ಕಾನೂನು ಹೋರಾಟಕ್ಕೆ ನಾನೂ ಸಹ ಸಿದ್ಧ ಎಂದ ರಮೇಶ್ ಜಾರಕಿಹೊಳಿ‌ ಅವರು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.

Related posts: