ಘಟಪ್ರಭಾ:ದಲಿತ ಮುಖಂಡರಿಂದ ಊಟದ ತಟ್ಟೆ ದೇಣಿಗೆ
ದಲಿತ ಮುಖಂಡರಿಂದ ಊಟದ ತಟ್ಟೆ ದೇಣಿಗೆ
ಘಟಪ್ರಭಾ ಅ 25: ಸಮೀಪದ ಅರಭಾಂವಿ ಗ್ರಾಮದ ಇಂದಿರಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 156 ಊಟದ ತಟ್ಟೆಗಳನ್ನು ದಲೀತ ಮುಖಂಡರಾದ ಮನೋಹರ ಲಕ್ಕಪ್ಪಾ ಅಜ್ಜನಕಟ್ಟಿ ಹಾಗೂ ಸೌಮ್ಯಾ ಸಂಜು ಕುಲಕರ್ಣಿ ಇವರು ದೇಣಿಗೆಯಾಗಿ ನೀಡಿದರು.
ಶಾಲೆಯಲ್ಲಿ ಜರುಗಿದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮನೋಹರ ಅಜ್ಜನಕಟ್ಟಿ ಮಾತನಾಡಿ ಶಿಕ್ಷಕರು ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳು ಮಕ್ಕಳಿಗೆ ದೊರಕುವಂತೆ ಮಾಡಿ ಒಳ್ಳೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಕರೆ ನೀಡಿದರು.
ಪ್ರಧಾನ ಗುರುಗಳಾದ ಬಸವರಾಜ ಮುಗಳಿ ಮಾತನಾಡಿ, ನಮ್ಮ ಶಾಲೆಯಿಂದ ಪ್ರಸಕ್ತ ಸಾಲಿನಲ್ಲಿ ಆರು ವಿಧ್ಯಾರ್ಥಿನಿಯರು ಮುರಾರಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಬೇಕು. ಸರ್ಕಾರದ ಬಿಸಿ ಊಟ, ಕ್ಷೀರ ಭಾಗ್ಯ, ಶಿಶ್ಯ ವೇತನ ವಿವಿಧ ಯೋಜನೆಗಳು ಸೇರಿದಂತೆ ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈದೇ ಸಂದರ್ಭದಲ್ಲಿ ಗಣ್ಯರಿಂದ ಮಕ್ಕಳಿಗೆ ಶಾಲಾ ಸಮವಸ್ತ್ರಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಗುಂಡು ಬಂಡಿವಡ್ಡರ, ಉಪಾಧ್ಯಕ್ಷ ರಮೇಶ ಲೋಟೆ, ಸದಸ್ಯರಾದ ಕಲ್ಲೋಳೆಪ್ಪಾ ಮ್ಯಾಗೇರಿ, ಸಂತೋಷ ಬಂಡಿವಡ್ಡರ, ಪ.ಪಂ ಸದಸ್ಯರಾದ ಕುಮಾರ ಪೂಜೇರಿ ಹಾಗೂ ಶಿಕ್ಷಿಕಿಯರಾದ ಎನ್.ಎನ್.ಕುಲಕÀರ್ಣಿ, ಸಿ.ಎಸ್.ವಗ್ಗನವರ, ಎಚ್.ವಾಯ್.ಗುಮಚನಮರಡಿ, ಎನ್.ಆರ್.ದಳವಾಯಿ, ಶಾರದಾ ತುಂಗಳ ಸೇರಿದಂತೆ ಅನೇಕರು ಇದ್ದರು.