RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಅವಹೇಳನಕಾರಿ ಪೋಸ್ಟ್ : ಸೋಮಶೇಖರ ಸೊಗಲದನನ್ನು ಕೂಡಲೇ ಬಂಧಿಸಿ: ಡಾ. ರಾಜೇಂದ್ರ ಸಣ್ಣಕ್ಕಿ

ಗೋಕಾಕ:ಅವಹೇಳನಕಾರಿ ಪೋಸ್ಟ್ : ಸೋಮಶೇಖರ ಸೊಗಲದನನ್ನು ಕೂಡಲೇ ಬಂಧಿಸಿ: ಡಾ. ರಾಜೇಂದ್ರ ಸಣ್ಣಕ್ಕಿ 

ಅವಹೇಳನಕಾರಿ ಪೋಸ್ಟ್ : ಸೋಮಶೇಖರ ಸೊಗಲದನನ್ನು ಕೂಡಲೇ ಬಂಧಿಸಿ: ಡಾ. ರಾಜೇಂದ್ರ ಸಣ್ಣಕ್ಕಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 19 :

 

 

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ನಿಂದಿಸಿರುವ ರಾಮದುರ್ಗದ ನಿವಾಸಿ ಸೋಮಶೇಖರ ವಿ. ಸೊಗಲದ ಎಂಬವನನ್ನು ಕೂಡಲೇ ಬಂಧಿಸಬೇಕೆಂದು ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಲ ದಿನಗಳ ಹಿಂದೆ ಸೋಮಶೇಖರ ಸೊಗಲದ ವಾಟ್ಸಾಪ್ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂಥ ಹಾಗೂ ಸಿದ್ಧರಾಮಯ್ಯ ಅವರ ತೆಜೋವಧೆ ಮಾಡುವಂಥ ಹೇಳಿಕೆಯ ಮೇಲೆ ಕಾನೂನು ಕ್ರಮ ಜರುಗಿಸಲು ಆತನ ವಿರುದ್ಧ ರಾಮದುರ್ಗ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ 2 ದಿನಗಳ ಕಳೆದರೂ ಇನ್ನೂವರೆಗೆ ಆತನ ಬಂಧನವಾಗಿರುವದಿಲ್ಲ. ಪೋಲೀಸರು ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಿರುವದು ತಿಳಿಯದಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆಯ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ವಾಚಾಮಗೋಚರವಾಗಿ ನಿಂದಿಸಿರುತ್ತಾರೆ. ಸಿದ್ಧರಾಮಯ್ಯ ಅವರು ಭೂಮಿಗೆ ಭಾರ, ಸಾಯಲಿ ಎಂದು ಜರಿದಿರುತ್ತಾರೆ. ಇದು ಕೊಲೆ ಬೆದರಿಕೆಯ ಮನಃಸ್ಥಿತಿ ಆತನ ವಿಕೃತಿ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಮುಂದುವರೆದು ಕೆಲವು ಜಾತಿ ಹಾಗೂ ಧರ್ಮಗಳ ಜನರ ಭಾವನೆಗಳಿಗೆ ಧಕ್ಕೆ ಬರುವಂತಹ, ಕೋಮು ಸಾಮರಸ್ಯ ಕದಡುವಂತಹÀ ಹಾಗೂ ಸಂಘರ್ಷಕ್ಕೆ ಎಡೆ ಮಾಡುವಂತಹ ಪ್ರಚೋದನಕಾರಿ ಮಾತುಗಳು ಈ ವಿಡಿಯೋದಲ್ಲಿವೆ. ಇನ್ನಿತರ ರಾಜಕೀಯ ಮುಖಂಡರುಗಳ ವ್ಯಕ್ತಿತ್ವದ ಮೇಲೆ ತೇಜೋವಧೆ ನಡೆಸಿರುತ್ತಾರೆ. ಇದರಿಂದ ನಮ್ಮಂಥ ಲಕ್ಷಾಂತರ ಕುರುಬ ಜನಾಂಗದ ಭಾವನೆಗಳಿಗೆ ಧಕ್ಕೆಯಾಗಿರುತ್ತದೆ. ಸೋಮಶೇಖರ. ಸೊಗಲದ ಈತ ಸಮಾಜದ ಸಾಮರಸ್ಯ ಮತ್ತು ಸ್ವಾಸ್ಥ್ಯತೆಗೆ ಧಕ್ಕೆ ಉಂಟು ಮಾಡುವ ಸಂಚನ್ನು ನಡೆಸಿದ್ದು ಆತನ ಮೇಲೆ ರಾಮದುರ್ಗ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸುರೇಶ ದೊಡವಾಡ ಅವರು ಫಿರ್ಯಾದಿ ನೀಡಿದ್ದು ಈ ಕುರಿತು ರಾಮದುರ್ಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಪೋಲೀಸ್ ಇಲಾಖೆ ಎಚ್ಚೆತ್ತು ಆತನನ್ನು ಬಂಧಿಸಲು ಮುಂದಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: