ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಆಹಾರ ಧಾನ್ಯ ಕಿಟ್ಗಳ ವಿತರಣೆ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಆಹಾರ ಧಾನ್ಯ ಕಿಟ್ಗಳ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 27 :
ಬಡವ-ಬಲ್ಲಿದ, ಜಾತಿ-ಮತ, ಪಂಥ ಎಂಬ ಬೇದ ಭಾವವಿಲ್ಲದೇ ಅರಭಾಂವಿ ಮತಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ ಆಹಾರ ಧಾನ್ಯ ಕಿಟ್ಗಳನ್ನು ನೀಡಿದ್ದಾರೆ. ಈಗಾಗಲೇ ಮತಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕ್ ವಿತರಿಸಿದ್ದಾರೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ದೇಶಾದ್ಯಂತ ಹರಡುತ್ತಿರುವ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಲಾಕ್ಡೌನ್ ಹಾಕಲಾದ ಹಿನ್ನಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ 1025 ಕುಟುಂಬಗಳಿಗೆ ಉಚಿತವಾಗಿ ನೀಡಿರುವ ಆಹಾರ ಧಾನ್ಯ ಕಿಟ್ಗಳನ್ನು ರವಿವಾರದಂದು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡಗೈ ದಾನಿ ಬಾಲಚಂದ್ರ ಅವರನ್ನು ಅರಭಾಂವಿ ಮತಕ್ಷೇತ್ರದ ಶಾಸಕರಾಗಿ ಪಡೆದಿರುವ ನಾವೆಲ್ಲರೂ ಸುದೈವಿಗಳಾಗಿದ್ದೆವೆ. ನೆರೆ ಹಾವಳಿಗೆ ಈ ಹಿಂದೆ ಅರಭಾಂವಿ ಮತಕ್ಷೇತ್ರದ ಹಲವು ಗ್ರಾಮಗಳು ತುತ್ತಾದಾಗ ನಿರಾಶ್ರಿತರಾದ ಎಲ್ಲಾ ಹಳ್ಳಿಗಳ ಜನರಿಗೆ ಆಸರೆಯಾಗಿ ಸಹಾಯ, ಸಹಕಾರ ನೀಡಿದ ಬಾಲಚಂದ್ರ ಜಾರಕಿಹೊಳಿ ಅವರ ಸಾಮಾಜಿಕ ಕಳಕಳಿಯನ್ನು ಈ ವೇಳೆ ಡಾ. ಸಣ್ಣಕ್ಕಿ ಅವರು ಸ್ಮರಿಸಿದರು.
ಗ್ರಾಮ ಪಂಚಾಯ್ತಿ ಪಿಡಿಒ ಎಚ್.ಎನ್.ಬಾವಿಕಟ್ಟಿ ಮಾತನಾಡಿ, ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಧಾನ್ಯ ಕಿಟ್ ಪಡೆದುಕೊಳ್ಳಬೇಕೆಂದು ಸ್ಥಳೀಯರಿಗೆ ತಿಳಿಸಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಕರೊನಾ ಸೈನಿಕರು, ಪ್ರಾಥಮಿಕ ಉಭಯ ಶಾಲೆಗಳ ಬಿಸಿಯೂಟ ಅಡುಗೆ ಸಿಬ್ಬಂದಿ, ಆಹಾರ ಧಾನ್ಯ ಕಿಟ್ಗಳನ್ನು ವ್ಯವಸ್ಥಿತವಾಗಿ ಸ್ಥಳೀಯ ಕುಟುಂಬಗಳಿಗೆ ವಿತರಿಸಿದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಗೋಕಾಕ ಎನ್ಎಸ್ಎಫ್ ಟೀಂ, ರಮೇಶ ಅಳಗುಂಡಿ, ವೈ.ಸಿ.ಶೀಗಿಹಳ್ಳಿ. ಆರ್.ಬಿ.ಬೆಟಗೇರಿ, ಬಸವರಾಜ ಪಣದಿ, ರಮೇಶ ನೀಲಣ್ಣವರ, ಶ್ರೀಧರ ದೇಯಣ್ಣವರ, ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು ಹಾಗೂ ಕರೊನಾ ಸೈನಿಕರು, ಕುಲಗೋಡ ಪೊಲೀಸ್ ಠಾಣೆ ಪೊಲೀಸ್ ಪೇದೆಗಳು, ಗ್ರಾಪಂ ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.