RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಗೋಕಾಕ ಡವಲಫರ್ಸ್ಸ ನವರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ

ಗೋಕಾಕ:ಗೋಕಾಕ ಡವಲಫರ್ಸ್ಸ ನವರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ 

ಗೋಕಾಕ ಡವಲಫರ್ಸ್ಸ ನವರ ಕಾರ್ಯ ಶ್ಲಾಘನೀಯ : ಮುರಘರಾಜೇಂದ್ರ ಶ್ರೀ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 15 :

 

 

ತರಕಾರಿಗಳನ್ನು ಖರೀದಿಸಿ ನಗರದ ಜನತೆಗೆ ಉಚಿತವಾಗಿ ತರಕಾರಿಗಳನ್ನು ವಿತರಿಸುತ್ತಿರುವ ಗೋಕಾಕ ಡವಲಫರ್ಸ್ಸ ನವರ ಕಾರ್ಯ ಶ್ಲಾಘನೀಯ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು

ಬುಧವಾರದಂದು ನಗರದಲ್ಲಿ ಗೋಕಾಕ ಡವಲಫರ್ಸ್ಸ ಅವರು ನೀಡುತ್ತಿರುವ ಉಚಿತ ತರಕಾರಿಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಹಿಂತಹ ಈ ಕಾರ್ಯದಿಂದ ರೈತರಿಗೆ ಅನುಕೂಲ ಮಾಡುವದರೊಂದಿಗೆ ಜನತೆಗೂ ಅನುಕೂಲ ವಾಗುತ್ತದೆ ಈ ತುರ್ತು ಪರಿಸ್ಥಿತಿಯಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಕೊರೋನಾ ವೈರಸ್ ವಿರುದ್ಧ ಹೋರಾಡೋಣಾ ಎಂದು ಹೇಳಿದರು

ಗೋಕಾಕ ಡವಲಫರ್ಸ್ಸನ ಜಾವೇದ ಗೋಕಾಕ ಮಾತನಾಡಿ ರೈತರ ತಮ್ಮ ಹೊಲದಲ್ಲಿ ಬೆಳೆದ ತರಕಾರಿಗಳನ್ನು ಹಾಳು ಮಾಡದೆ ನಮಗೆ ತಿಳಿಸಿದರೆ ಮಾರುಕಟ್ಟೆಯ ಯೋಗ್ಯ ಬೆಲೆ ನೀಡಿ ಖರಿದಿಸಿ ಬಡವರಿಗೆ ಉಚಿತವಾಗಿ ಹಂಚಲು ಸೂಕ್ತ ಕ್ರಮ ಕೈಗೋಳ್ಳಲಾಗುವದು ಎಂದು ಹೇಳಿದರು

ಈ ಸಂದರ್ಭದಲ್ಲಿ ಗೋಕಾಕ ಡವಲಫರ್ಸ್ಸನ ಮುಖ್ಯಸ್ಥ ಕುತಬುದ್ದೀನ ಗೋಕಾಕ , ಅಂಜುಮನ್ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ , ಮೌಲಾನಾ ಬಶಿರುಲ್ಲ ಹಕ್ಕ , ಮಹಾಂತೇಶ ಗವಿಮಠ, ಜಾಕೀರ ನಾಯಿಕ , ಇಲಾಹಿ ಖೈರದಿ , ಇಸ್ಮಾಯಿಲ್ ಗೋಕಾಕ, ಅಬ್ದುಲ್ ಗಣಿ ಗೋಕಾಕ, ಮೌಲಾನಾ ಮಹ್ಮದ್ ಯೂನೂಸ, ಅಡಿವೇಶ ಗವಿಮಠ ಸೇರಿದಂತೆ ಅನೇಕರು ಇದ್ದರು

Related posts: