ಗೋಕಾಕ:ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ಸ್ವೀಕರಿಸಿ
ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ಸ್ವೀಕರಿಸಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 25 :
ಸತ್ವಯುತ, ಪೌಷ್ಟಿಕಾಂಶಯುಳ್ಳ ಆಹಾರ ಸೇವನೆಯನ್ನು ಗರ್ಭಿಣಿಯರು ಸೇವಿಸುವದರಿಂದ ಹುಟ್ಟುವ ಮಕ್ಕಳು ಆರೋಗ್ಯವಂತರಾಗಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ಗರ್ಭಿಣಿಯರು ಗಮನಹರಿಸಬೇಕು. ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ಸ್ವೀಕರಿಸಬೇಕು ಎಂದು ಕವಿ ಹಾಗೂ ಶಿಕ್ಷಕ ಈಶ್ವರ ಮಮದಾಪೂರ ಹೇಳಿದರು.
ಅವರು, ತಾಲೂಕಿನ ನಂದಗಾಂವ ಗ್ರಾಮದ ಗಾಂಧಿ ನಗರ ಮುತ್ನಾಳದ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ಗರ್ಭಿಣಿಯರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಲಹೆ ನೀಡಿದರು.
ಗರ್ಭಿಣಿ ಗಂಗವ್ವ ರವಿಚಂದ್ರನ್ ಚಿಂಚಣಿ ಇವರ ಸೀಮಂತ ಕಾರ್ಯಕ್ರಮವನ್ನು ಹಿರಿಯರಾದ ನೀಲವ್ವ ಶಿರಗಾಂವಿ ನೆರವೇರಿಸಿದರು. ಲಕ್ಷ್ಮೀ ಮಗದುಮ್ ಸಿರಿನ್ ನಗಾರಿ, ಪೂಜಾ ತಿಗಡಿ, ಪೂಜಾ ಮುಗಳಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕರ್ತೆ ಶಿವಲೀಲಾ ಶಿರಹಟ್ಟಿ ಸ್ವಾಗತಿಸಿ, ನಿರೂಪಿಸಿದರು. ಮೀನಾಕ್ಷಿ ದಾಸರ ವಂದಿಸಿದರು.