ಬೆಳಗಾವಿ:ಮತ್ತೆ ಭುಗಿಲೆದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ
ಮತ್ತೆ ಭುಗಿಲೆದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಫೆ 18 :
ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಭುಗಿಲೆದ್ದಿದ್ದು, ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಘಟಪ್ರಭಾ ಬಳಿಯ ಗುಬ್ಬಲಗುಡ್ಡದಲ್ಲಿನ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಮೂರುಸಾವಿರ ಮಠದ ಪೀಠ ಅಲಂಕರಿಸುವುದನ್ನು ತಡೆಯಲು ಹುನ್ನಾರ ನಡೆಯುತ್ತಿದೆ. ಇದರಿಂದ ಘಟಪ್ರಭಾ ಸುತ್ತಲಿನ ಕೆಂಪಯ್ಯಸ್ವಾಮಿ ಮಠದ ಸಾವಿರಾರು ಭಕ್ತರು ಆಕ್ರೋಶಗೊಂಡಿದ್ದಾರೆ. ಕೆಂಪಯ್ಯ ಮಠವು ಮೂರುಸಾವಿರ ಮಠದ ಶಾಖಾ ಮಠವಾಗಿದೆ.
ಉದ್ಯಮಿ ವಿಜಯ ಸಂಕೇಶ್ವರ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸದ್ಯದ ಪೀಠಾಧೀಶರಾದ ಮೂಜಗಂ ಅವರು ಮಠ ನಡೆಸಲು ಅಸಮರ್ಥರಾಗಿದ್ದಾರೆ. ಅವರು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಪೀಠ ಬಿಟ್ಟು ಕೊಡಬೇಕು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿದೆ.
ಇಂದು ಸಂಜೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗುಬ್ಬಲಗುಡ್ಡದ ಮಲ್ಲಿಕಾಜು೯ನ ಸ್ವಾಮೀಜಿ, “ಕೆಲವರು ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದಾರೆ. ಪ್ರಸ್ತುತ ಪೀಠಾಧಿಪತಿ ಮೂಜಗಂ ಅವರು ವ್ಯವಸ್ಥಿತವಾಗಿ ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಮೂಜಗಂ ಅವರು ೩೦ ಮಾಚ್೯ ೧೯೯೮ ರಲ್ಲಿಯೇ ತಮ್ಮನ್ನು ಉತ್ತರಾಧಿಕಾರಿ ನೇಮಿಸಿದ್ದು, ಈ ಕುರಿತಂತೆ ಮಠದ ಬೈಲಾ ಪ್ರಕಾರ, ಎಲ್ಲ ಭಕ್ತರ ಸಮ್ಮುಖದಲ್ಲಿ ಅಧಿಕೃತ ನೋಂದಣಿ ಮಾಡಲಾಗಿದೆ. ಅದನ್ನು ರದ್ದು ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಮಠದ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ” ಎಂದರು. ಇದೇ ಸಂದಭ೯ದಲ್ಲಿ ಅವರು ಅಧಿಕೃತ ದಾಖಲೆಗಳನ್ನು ಪ್ರದಶಿ೯ಸಿದರು.
೨೦೧೨ ರಲ್ಲಿ ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ಸೇರಿದಂತೆ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಯವರನ್ನು ಉತ್ತರಾಧಿಕಾರಿ ಮಾಡಲು ತೀಮಾ೯ನ ಕೈಗೊಂಡಿದ್ದರಿಂದ, ಅದನ್ನು ಪ್ರಶ್ನಿಸಿ ಮಲ್ಲಿಕಾಜು೯ನ ಸ್ವಾಮೀಜಿಯವರು ೨೦೧೪ ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಜಗದೀಶ ಶೆಟ್ಟರ್, ವಿಜಯ ಸಂಕೇಶ್ವರ, ಬಸವರಾಜ ಹೊರಟ್ಟಿ, ಮೋಹನ ಲಿಂಬಿಕಾಯಿ, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಸಮಾಜದ ಹಲವು ನಾಯಕರು ಉನ್ನತ ಸಮಿತಿಯಲ್ಲಿದ್ದರು.
ಉನ್ನತ ಸಮಿತಿಯ ತೀಮಾ೯ನದ ವಿರುದ್ಧ ಘಟಪ್ರಭಾ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ೬ ಅಕ್ಟೋಬರ್ ೨೦೧೪ ರಂದು ‘ಘಟಪ್ರಭಾ ಬಂದ್’ ಮಾಡಿದ್ದರು. ಉತ್ತರಾಧಿಕಾರಿ ವಿವಾದದಿಂದ ಪ್ರಸ್ತುತ ಮಠದ ಪೀಠಾಧಿಪತಿ ಮೂಜಗಂ ಅವರು ಮಾನಸಿಕವಾಗಿ ನೊಂದುಕೊಂಡಿದ್ದು, ಮಠದ ಆಗುಹೋಗುಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.
ಆದರೆ, ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಹುಬ್ಬಳ್ಳಿಯ ನಾಯಕರು ಅಧಿಕೃತವಾಗಿ ಉತ್ತರಾಧಿಕಾರಿ ಎಂದು ನೋಂದಣಿಯಾಗಿರುವ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಕೈಬಿಟ್ಟು, ಪ್ರಸ್ತುತ ಪೀಠಾಧಿಪತಿಗಳಾದ ಮೂಜಗಂ ಅವರ ಆಶಯಕ್ಕೆ ವಿರುದ್ಧವಾಗಿ ದಿಂಗಾಲೇಶ್ವರ ಸ್ವಾಮೀಜಿಯನ್ನು ಪೀಠಾಧಿಪತಿ ಮಾಡಲು ಅತೀವ ಆಸಕ್ತಿ ತೋರಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.