ಗೋಕಾಕ:ಸೈನಿಕ ಮತ್ತು ರೈತ ದೇಶದ ಎರಡು ಕಣ್ಣುಗಳಿದ್ದಂತೆ : ಶ್ರೀಕಾಂತ ನೇಗಿನಾಳ
ಸೈನಿಕ ಮತ್ತು ರೈತ ದೇಶದ ಎರಡು ಕಣ್ಣುಗಳಿದ್ದಂತೆ : ಶ್ರೀಕಾಂತ ನೇಗಿನಾಳ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 15 :
ಸೈನಿಕ ಮತ್ತು ರೈತ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಸೋನಾಲಿಕಾ ಕಂಪನಿಯ ದಕ್ಷಿಣ ಭಾರತದ ಮುಖ್ಯಸ್ಥ ಶ್ರೀಕಾಂತ ನೇಗಿನಾಳ ಹೇಳಿದರು.
ಶನಿವಾರ ನಗರದ ಸೋನಾಲಿಕಾ ಟ್ರ್ಯಾಕ್ಟರ್ ಶೋರೂಂನಲ್ಲಿ ಸೋನಾಲಿಕಾ ಟೈಗರ್ಸ್ ಟ್ರ್ಯಾಕ್ಟರ್ ಉದ್ಘಾಟನಾ ಸಮಾರಂಭದಲ್ಲಿ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಶೃದ್ಧಾಂಜಲಿ ಹಾಗೂ ನಿವೃತ್ತಗೊಂಡ ಯೋಧರಿಗೆ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಗಡಿ ಕಾಯುವ ಸೈನಿಕರಿಗೆ ಮತ್ತು ಅನ್ನ ನೀಡುವ ಅನ್ನದಾತ ರೈತರಿಗೆ ನಾವು ಗೌರವ ನೀಡಬೇಕು. ಅವರ ಶ್ರಮ ಅತ್ಯಂತ ಮಹತ್ತರವಾಗಿದೆ. ರೈತನಿಗೆ ಬೆನ್ನೆಲಬು ಆಗಿ ಸೋನಾಲಿಕಾ ಟ್ರ್ಯಾಕ್ಟರ್ ಕೆಲಸ ಮಾಡುತ್ತಿದೆ.ಯೂರೋಪ ದೇಶದ ತಂತ್ರಜ್ಞಾನದಲ್ಲಿ ಭಾರತ ದೇಶದಲ್ಲಿ ತಯ್ಯಾರಾಗುವ ಜಗತ್ತಿನ ಏಕೈಕ ಟ್ರ್ಯಾಕ್ಟರ್ ಸೋನಾಲಿಕಾ ಟೈಗರ್ಸ್ ಆಗಿದೆ. ರೈತರಿಗೆ ಹೆಚ್ಚಿನ ರೀತಿಯಲ್ಲಿ ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಸೋನಾಲಿಕಾ ಟ್ರ್ಯಾಕ್ಟರ್ ಬಳಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಎ.ಎಸ್.ಹುಳ್ಳೇರ, ಕಲ್ಮೇಶ ಡಿ, ಶೇಖರ ಜಾಯಿ, ಶ್ರೀಶೈಲ ಮಡಿವಾಳ, ವಿಶ್ವನಾಥ ಹಿರೇಮಠ, ಪ್ರಕಾಶ ಬೋರನಟ್ಟಿ, ಆನಂದ ವಾಲಿ, ಅಬ್ದುಲ ಕರೀಂ, ಮಾಯಪ್ಪ ಲಿಂಬಿಗಿಡದ, ಸುಪ್ರೀತ ಬಡಿಗೇರ ಸೇರಿದಂತೆ ನಿವೃತ್ತ ಯೋಧರು ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.